ಗೋಕರ್ಣ: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ವಿಶ್ವವಾಣಿ ಆಶ್ರಯದಲ್ಲಿ ಗ್ಲೋಬಲ್ ಅಚೀವರ್ಸ್  ಸಮ್ಮೇಳನದಲ್ಲಿ ಭಾರತದ ಹಾಗೂ ರಷ್ಯಾದ ಗಣ್ಯ ಮಾನ್ಯರ ಸಮ್ಮುಖದಲ್ಲಿ ಗ್ಲೋಬಲ್ ಅಚೀವರ್ಸ್ (Global Achievers) ಪ್ರಶಸ್ತಿಯನ್ನು ಉತ್ತರ ಕನ್ನಡದ ಉದ್ಯಮಿ, ಗೋದಾವರಿ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಡಿ ನಾಯಕ ದೇವರಬಾವಿ  ಅವರಿಗೆ ಪ್ರದಾನ ಮಾಡಲಾಯಿತು.

ರಷ್ಯಾದ ರಾಜ ತಾಂತ್ರಿಕರು, ಸಚಿವರು,ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ,ಶಾಂತವೀರ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ,ಮಾಜಿ ಸಚಿವ ಆರಗ ಜ್ಞಾನೇಂದ್ರ ಮುಂತಾದವರು ಈ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ  ಗಣ್ಯರು ಮಾತನಾಡಿ ಇಂತಹ ಒಂದು ಪ್ರಶಸ್ತಿ ಪ್ರಧಾನ ಸಮಾರಂಭಗಳು ಎರಡು ದೇಶಗಳ ಸಂಬಂಧವನ್ನು ಬೆಸೆಯುವ ಕೊಂಡಿಗಳಾಗಿವೆ. ರಷ್ಯಾ ಮತ್ತು ಭಾರತ ಯಾವ ಕಾಲದಲ್ಲಿಯೂ ಹಗೆತನವನ್ನು ಸಾಧಿಸಿಲ್ಲ. ವಿಶ್ವವಾಣಿ ಇಂತಹ ಒಂದು ಮಹತ್ವದ ವಿಚಾರ ಕೈಗೊಂಡು ನಮ್ಮ ದೇಶದ ರಾಜಧಾನಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಭಾರತ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.

ಕೇವಲ ಸಹಕಾರಿ ಸಂಘದಲ್ಲಿ ಅಷ್ಟೇ ಸಾಧನೆಯನ್ನು ಮಾಡದೆ, ಉದ್ಯಮ ಕ್ಷೇತ್ರ ಹೊಟೇಲ್ ಉದ್ಯಮ, ವಿದಾಯಕ ಕಾರ್ಯಕ್ರಮಗಳು, ಆರ್ಥಿಕ ಸಹಕಾರ ಜೊತೆಯಲ್ಲಿ ಸ್ವಾವಲಂಬಿ ಉದ್ಯೋಗಕ್ಕೆ ದಾರಿಮಾಡಿಕೊಟ್ಟು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡಿದ ರಾಘವೇಂದ್ರ ಡಿ ನಾಯಕ ದೇವರಬಾವಿಯವರು ಗೋದಾವರಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿ,ಹುಬ್ಬಳ್ಳಿಯ ಗೋದಾವರಿ  ಇನ್ಫ್ರಾ  ಮಾಲಕರಾಗಿ, ಹತ್ತು ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಸಾಧನೆ ಮಾಡಿದ್ದು ಈ ಗ್ಲೋಬಲ್ ಅಚಿವರ್ಸ್ ಅವಾರ್ಡ್ ಸ್ವೀಕರಿಸುತ್ತಿರುವುದು ಯೋಗ್ಯ ವ್ಯಕ್ತಿಗೆ ಸಲ್ಲುವ ಗೌರವವಾಗಿದೆ ಎನ್ನುವ ವಿಚಾರಗಳು ಗಣ್ಯ ವ್ಯಕ್ತಿಗಳ ಬಾಯಿಂದ ಕೇಳಿ ಬಂದವು. ರಾಘವೇಂದ್ರ ಡಿ ನಾಯಕ್ ದೇವರ ಬಾವಿಯವರ ಜೊತೆಯಲ್ಲಿ ಬಿಸಿ ಪಾಟೀಲ್,ಪ್ರಮೋದ ಮಧ್ವರಾಜ್ ಸೇರಿದಂತೆ ಇನ್ನೂ ಹತ್ತು ಹಲವು ಪ್ರಮುಖರಿಗೆ ಈ ಪ್ರಶಸ್ತಿಯನ್ನು ಅವರವರ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ನೀಡಲಾಯಿತು

ಪ್ರಶಸ್ತಿ  ಸಿಕ್ಕಿರುವುದು ಹೆಮ್ಮೆ ತಂದಿದೆ
ನನಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ರಷ್ಯಾದ ರಾಜಧಾನಿಯಲ್ಲಿ ಇಂತಹ ಪ್ರಮುಖರಾದ ಭಾರತ ಮತ್ತು ರಷ್ಯಾದ ಗಣ್ಯರು, ಸ್ವಾಮೀಜಿಗಳ ಅಮೃತ ಹಸ್ತದ ಮೂಲಕ ಗ್ಲೋಬಲ್ ಅಚಿವರ್ಸ್ ಅವಾರ್ಡ್ ಪ್ರಶಸ್ತಿ ದೊರೆತಿರುವುದು ಅತ್ಯಂತ ಹೆಮ್ಮೆ ತಂದಿದೆ. ಜೊತೆಯಲ್ಲಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇನ್ನೂ ಸಾದನೆಯನ್ನು ಮಾಡಿ ಈ ಸಮಾಜಕ್ಕೆ ನನ್ನಿಂದಾದ ಸಹಕಾರವನ್ನು ನೀಡುತ್ತೇನೆ.ಪ್ರಶಸ್ತಿ ಪ್ರಧಾನ ಮಾಡಿದ ಸರ್ವರಿಗೂ ನಾನು ಆಬಾರಿ. ಜೊತೆಯಲ್ಲಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನನ್ನ ಕರ್ನಾಟಕದ ಸರ್ವ ಜನಸಮುದಾಯಕ್ಕೆ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾರಿಗೂ ಕೃತಜ್ಞತಾಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಅಧ್ಯಕ್ಷರು ಗೋದಾವರಿ ಸಮೂಹ ಸಂಸ್ಥೆಗಳು ಹುಬ್ಬಳ್ಳಿ ಗೋಕರ್ಣ. ಮಾಲಕರು ಗೋದಾವರಿ ಇನ್ಪ್ರಾ  ಹುಬ್ಬಳ್ಳಿ, ಅಧ್ಯಕ್ಷರು ಗೋದಾವರಿ ಸೌಹಾರ್ದ ಸಹಕಾರಿ   ಗೋಕರ್ಣ