ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಯಾವುದೇ ದಾಖಲೆ‌ ಇಲ್ಲದೆ‌ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಡಾಂಬರ್ ಟ್ಯಾಂಕರ್‌ ಒಂದನ್ನ ತೆರಿಗೆ ಅಧಿಕಾರಿಗಳು ವಶಕ್ಕೆ‌ ಪಡೆದುಕೊಂಡಿರುವ ಘಟನೆ ಅಂಕೋಲಾ‌ ತಾಲೂಕಿನ ಬಾಳೆಗುಳಿ ಕ್ರಾಸ್ ಬಳಿ ನಿನ್ನೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.

ತೆರಿಗೆ ಅಧಿಕಾರಿಗಳು ಗಸ್ತು ತಿರುಗುವ ಸಮಯದಲ್ಲಿ ಡಾಂಬರ್ ತುಂಬಿದ ಟ್ಯಾಂಕರ್‌ ಅಂಕೋಲಾ‌‌ ಕಡೆಯಿಂದ‌ ಕುಮಟಾ ಕಡೆಗೆ ಬರುತ್ತಿತ್ತು ಎನ್ನಲಾಗಿದ್ದು, ಈ ವೇಳೆ ಬಾಳೆಗುಳಿ ಕ್ರಾಸ್ ಬಳಿ ಡಾಂಬರ್ ಟ್ಯಾಂಕರ್ ವಶಕ್ಕೆ ಪಡೆಯಲಾಗಿದೆ. ಆದರೆ ವಶಕ್ಕೆ‌ ಪಡೆದ ಈ ಟ್ಯಾಂಕರ್‌ನ ತೆರಿಗೆ ಅಧಿಕಾರಿಗಳು ಸ್ಥಳೀಯ ಪೊಲೀಸ್.ಠಾಣೆಗೆ ಒಪ್ಪಿಸದೆ ಕುಮಟಾಕ್ಕೆ ತೆಗೆದುಕೊಂಡು ಬಂದಿದ್ದು.ಅದು ಅಲ್ಲದೆ‌ ಕುಮಟಾ ಪೊಲೀಸ್ ಠಾಣೆಯ ವರೆಗೆ ವಶಕ್ಕೆ ಪಡೆದ ಟ್ಯಾಂಕರ್ ತೆಗೆದುಕೊಂಡು ಹೋಗಿ ಬಳಿಕ ವಾಪಸ್ ತೆರಿಗೆ ಅಧಿಕಾರಿಗಳು ತಾವು ವಶಕ್ಕೆ ಪಡೆದಿರೋದು ಎಂದು ಹೇಳಿ‌ ಠಾಣೆಯಿಂದ ವಾಪಸ್ ತಂದು ದಂಡ ಹಾಕಿದ್ದಾರೆನ್ನಲಾಗಿದೆ.

ವಶಕ್ಕೆ ಪಡೆದ ಟ್ಯಾಂಕರ್‌ ಚಾಲಕನ ಬಳಿ ಯಾವುದೇ ಸರಿಯಾದ ದಾಖಲೆ‌ ಇಲ್ಲದೆ‌ ಇರುವುದು ಬೆಳಕಿಗೆ ಬಂದಿದೆ. ಡಾಂಬರ್ ತುಂಬಿದ ಟ್ಯಾಂಕರ್ ಆಗಿದ್ದರು ಅದು ಅಧಿಕೃತವಾಗಿದ್ದರೆ‌ ಮಂಗಳೂರು ಕಡೆಯಿಂದ ಸಾಗಟವಾಗಬೇಕು. ಆದರೆ ಈ ಟ್ಯಾಂಕರ್ ಡಾಂಬರ್ ತುಂಬಿಕೊಂಡು ಯಲ್ಲಾಪುರ ಕಡೆಯಿಂದ ಕುಮಟಾ‌ ಕಡೆ ಹೇಗೆ ಬಂತು ಎನ್ನುವುದು ಪ್ರಶ್ನೆಯಾಗಿದೆ.‌ ಅದು ಅಲ್ಲದೆ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದ ಈ ಟ್ಯಾಂಕರ್‌ನಲ್ಲಿ ಅರ್ಧ ಟ್ಯಾಂಕರ್ ಮಾತ್ರ ಡಾಂಬರ್ ಇರುವುದನ್ನ ತೆರಿಗೆ ಅಧಿಕಾರಿಗಳೆ ಖಚಿತ ಪಡಿಸಿದ್ದಾರೆ.

ಅಕ್ರಮವಾಗಿ ಡಾಂಬರ್ ತುಂಬಿದ ಲಾರಿ ಎಲ್ಲಿಂದ‌ ಲೋಡಾಗಿ ಬಂದಿದೆ ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಲು ಸಾಧ್ಯವಿಲ್ಲ‌ ಎಂದಿದ್ದಾರೆ. ಈ ಬಗ್ಗೆ ಯಾವುದೇ ಸಮಗ್ರ ತನಿಖೆ ಆಗಿರುವಂತೆ ಕಂಡುಬರುತ್ತಿಲ್ಲ.‌ಕೇವಲ‌ ದಂಡ ಮಾತ್ರ ಹಾಕಲಾಗಿದೆ ಎನ್ನಲಾಗಿದೆ. ಈ ಡಾಂಬರ್ ಟ್ಯಾಂಕರ್‌ನಲ್ಲಿ ಅರ್ಧ ಮಾತ್ರ ಡಾಂಬರ್ ಸಾಗಾಟವಾಗುತ್ತಿದೆ ಎಂದಾದರೆ ಜಿಲ್ಲೆಯ ಯಾವುದೋ ಒಂದು ಮೂಲೆಯಲ್ಲಿ ಅಕ್ರಮ ಡಾಂಬರ್ ದಂಧೆ ನಡೆಯುತ್ತಿದೆ ಎನ್ನುವುದು ಈ ಘಟನೆಯಿಂದ‌‌ ಗೊತ್ತಾಗುತ್ತಿದೆ.ಹೀಗಾಗಿ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಇದೆ ಪ್ರಕರಣವನ್ನ ಸಮಗ್ರವಾಗಿ ತನಿಖೆ ನಡೆಸಿ ಅಕ್ರಮ ಡಾಂಬರ್ ದಂದೋಕರರ ಅಡಗು ತಾಣವನ್ನ ಪತ್ತೆ ಹಚ್ಚಬೇಕಿದೆ‌ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ