ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಬಂದರಿನ ಅಳಿವೆಯಲ್ಲಿ ಮೀನುಗಾರಿಕಾ ಬೋಟ್ವೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿರುವ ಘಟನೆ ನಡೆದಿದೆ.
ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ ‘ಲಕ್ಷ್ಮಿ ಕೃಪ’ ಹೆಸರಿನ ಬೋಟ್ ಇದಾಗಿದೆ. ಬೋಟ್ನಲ್ಲಿ ನಾಲ್ವರು ಮೀನುಗಾರರು ಇದ್ದು, ಅದೃಷ್ಟವಶಾತ್ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅಳಿವೆಯಲ್ಲಿ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಬೋಟ್ ನಿಯಂತ್ರಣ ಕಳೆದುಕೊಂಡು ಮುಳುಗಡೆಯಾಗಿದೆ ಎನ್ನಲಾಗಿದೆ. ಬೋಟ್ ಮುಳುಗಡೆಯಿಂದ ಸುಮಾರು 20 ಲಕ್ಷ ರೂಪಾಯಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಅಳಿವೆಯಲ್ಲಿ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಬೋಟ್ ನಿಯಂತ್ರಣ ಕಳೆದುಕೊಂಡು ಮುಳುಗಡೆಯಾಗಿದೆ ಎನ್ನಲಾಗಿದೆ. ಬೋಟ್ ಮುಳುಗಡೆಯಿಂದ ಸುಮಾರು 20 ಲಕ್ಷ ರೂಪಾಯಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ತದಡಿ ಅಳಿವೆಯಲ್ಲಿ ಬೋಟ್ ಮುಳುಗಡೆಯ ಘಟನೆಗಳು ಮುಂದುವರಿದಿದ್ದು, **ಎರಡು ದಿನಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಒಂದು ಬೋಟ್ ಮುಳುಗಡೆಯಾಗಿತ್ತು. ಇದೀಗ ಕಳೆದ ಒಂದು ವಾರದ ಅವಧಿಯಲ್ಲೇ ಮತ್ತೆ ಬೋಟ್ ಮುಳುಗಡೆಯಾಗಿರುವುದು ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮೀನುಗಾರಿಕಾ ಬೋಟ್ ಮುಳುಗೆಯಾಗುತ್ತಿದ್ದರು ಸಹ ಮೀನುಗಾರಿಕಾ ಇಲಾಖೆ ಸಚಿವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕರಾವಳಿ ಮೀನುಗಾರರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕರಾವಳಿ ಭಾಗದ ಶಾಸಕರಿಗೆ ಇಲಾಖೆ ಹೊಂದಿದ್ದರೆ ಇಷ್ಟ ಹೊತ್ತಿಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರಿಗೆ ಆಗಿರುವ ನಷ್ಟದ ಬಗ್ಗೆ ಪರಿಹಾರ ಘೋಷಣೆ ಆಗುತ್ತಿತ್ತು ಎಂದು ಮೀನುಗಾರರು ಆಡಿಕೊಳ್ಳುತ್ತಿದ್ದಾರೆ

