ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಧಾರವಾಡ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಲಂ ಹುಸೇನ್ ಅವರನ್ನು ಕಾರವಾರಕ್ಕೆ ನೂತನ ಸಹಾಯಕ ಆಯುಕ್ತರಾಗಿ (ಎಸಿ) ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಅವರು ಈ ಮೊದಲು ಧಾರವಾಡ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಒಂದು ವರ್ಷದಿಂದ ಕಾರವಾರ ಎಸಿ ಹುದ್ದೆ ಖಾಲಿಯಾಗಿದ್ದು, ಕುಮಟಾ ಎಸಿಯಾಗಿದ್ದ ಶ್ರವಣಕುಮಾರ ಅವರು ಹೆಚ್ಚುವರಿ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದರು. ಇದೀಗ ಸರ್ಕಾರದ ನೂತನ ಆದೇಶದ ಹಿನ್ನೆಲೆಯಲ್ಲಿ ಶಾಲಂ ಹುಸೇನ್ ಅವರನ್ನು ಕಾರವಾರದ ಎಸಿಯಾಗಿ ನೇಮಕ ಮಾಡಲಾಗಿದೆ.
ಶಾಲಂ ಹುಸೇನ್ ಅವರ ನೇಮಕದೊಂದಿಗೆ ಕಾರವಾರ ಉಪವಿಭಾಗಕ್ಕೆ ಪೂರ್ಣಾವಧಿ ಅಧಿಕಾರಿಯ ನಿಯೋಜನೆ ಆಗಿದ್ದು, ಆಡಳಿತಾತ್ಮಕ ಕಾರ್ಯಗಳಿಗೆ ವೇಗ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ
ಇದನ್ನೂ ಓದಿ/ ಸೇತುವೆಯಿಂದ ನದಿಗೆ ಬಿದ್ದ ಟಿಪ್ಪರ್ : ಚಾಲಕ ನಾಪತ್ತೆ, ಕ್ಲೀನರ್ ರಕ್ಷಣೆ

