ಸುದ್ದಿಬಿಂದು ಬ್ಯೂರೋ ವರದಿ/ ಕುಮಟಾ ತಾಲೂಕಿನ ನಿನ್ನೆ ರಾತ್ರಿ ಸುರಿದ ಭಾರೀ ಗುಡುಗು ಸಹಿತ ಮಳೆಗೆ ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಗಂಗೆಕೊಳ್ಳದ ಮನೆಯ ಪಕ್ಕದಲ್ಲಿರುವ ಸಣ್ಣ ಅಂಗಡಿಗೆ ಸಿಡಿಲು ಬಡಿದು ಬೆಂಕಿ ತಗಲಿದ ಪರಿಣಾಮ ಲಕ್ಷಾಂತರ ರೂ. ಹಾನಿಯಾಗಿದೆ.

ಕುಮಟಾ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಕಳೆದ ಎರಡು ವಾರಗಳಿಂದ ಚೆನ್ನಾಗಿ ಮಳೆಯಾಗುತ್ತಿದೆ. ಆಗಾಗಾ ರಭಸವಾಗಿ ಬೀಸುವ ಗಾಳಿ ಮಳೆಯಿಂದ ಅಲ್ಲಲ್ಲಿ ಹಾನಿಗಳ ಪ್ರಮಾಣ ಏರುತ್ತಲೇ ಸಾಗಿದೆ. ಬುಧವಾರ ರಾತ್ರಿ ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಗಂಗೆಕೊಳ್ಳದಲ್ಲಿ ಭಾರೀ ಗುಡುಗು ಸಹಿತ ಮಳೆಯಾಗಿದೆ. ಅಲ್ಲಿನ ಮಂಜುನಾಥ ಗೌಡರ ಮಾಲೀಕತ್ವದ ಮನೆಯ ಪಕ್ಕದಲ್ಲಿರುವ ಅಂಗಡಿಗೆ ಸಿಡಿಲು ಬಡಿದು ಬೆಂಕಿ ಹೊತ್ತುಕೊಂಡು ಅಂಗಡಿಯಲ್ಲಿದ್ದ ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಸುಮಾರು ೫೦ ಸಾವಿರ ನಗದು, ಪ್ರಿಡ್ಜ್, ಹಾಗೂ ಇನ್ನಿತರೆ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿದೆ. ಮಂಜುನಾಥ ಇವರು ಅಂಗವಿಕಲರಾಗಿದ್ದು, ಇವರಿಗೆ ಸಂಬಧಿಸಿದ ಕೃತಕ ಕಾಲು ಸಹ ಸುಟ್ಟು ಹೋಗಿದೆ. ಸುಮಾರು ೪.೫ ಲಕ್ಷ ರೂ. ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಯೋಗ್ಯ ಪರಿಹಾರ ನೀಡುವ ಭರವಸೆ ಕೂಡ ನೀಡಲಾಗಿದೆ ಎನ್ನಲಾಗಿದೆ.

ಇನ್ನು ತಾಲೂಕಿನ ಹಂದಿಗೋಣದಲ್ಲಿ ನಾಗೇಶ ಗಣಪತಿ ಮುಕ್ರಿ ಅವರ ಮನೆಗೂ ಮಳೆ ನೀರು ತಗುಲಿ ಗೃಹಬಳಕೆ ಸಾಮಗ್ರಿಗಳಿಗೆ ಹಾನಿಯಾಗಿದೆ. ಇಲ್ಲಿಯೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ

ಇದನ್ನೂ ಓದಿ/ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕರಿಂದ ಕಾರ್ಯಕರ್ತರ ಮನೆಗಳಿಗೆ ಸೌಹಾರ್ದಯುತ ಭೇಟಿ