ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗಾರಖಂಡ ಗ್ರಾಮದಲ್ಲಿ ಇಂದು ವಾರ್ಷಿಕ ರಸ್ತೆ ನಿರ್ವಹಣೆ ಹಾಗೂ ಮಳೆಗಾಲದ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆದ ಈ ಶ್ರಮದಾನದಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಮಾದರಿ ಸೇವಾಭಾವ ಮೆರೆದರು.
ಶಿರಸಿ–ಸಿದ್ದಾಪುರ ಮುಖ್ಯರಸ್ತೆಯ ತ್ಯಾಗಲಿ ತಂಗುದಾಣದಿಂದ ಹಂಗಾರಖಂಡ, ಸಾಸ್ಮೆಕಟ್ಟೆ ಹಾಗೂ ಗವಿನಗುಡ್ಡ–ಹಂಗಾರಖಂಡ ಪ್ರಾಥಮಿಕ ಶಾಲೆ ಮಾರ್ಗದ ಇಡುಕೈವರೆಗೆ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಿ, ಚರಂಡಿಗಳನ್ನು ತೆರವುಗೊಳಿಸಲಾಯಿತು. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು.
ಇದೇ ವೇಳೆ ವಿದ್ಯುತ್ ತಂತಿಗಳಿಗೆ ತಾಗುವ ಅಪಾಯಕಾರಿ ಮರದ ಕೊಂಬೆಗಳನ್ನು ಕತ್ತರಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಯಿತು. ವನಮಹೋತ್ಸವ ಅಂಗವಾಗಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶವೂ ಸಾರಲಾಯಿತು.
ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿ ಶ್ರಮದಾನದ ಮೂಲಕ ಗ್ರಾಮದ ರಸ್ತೆ ಹಾಗೂ ಪರಿಸರವನ್ನು ಸ್ವಚ್ಛಗೊಳಿಸಿದರು. ಭಾಗವಹಿಸಿದವರಿಗೆ ಚಹಾ, ತಿಂಡಿ ಹಾಗೂ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಈ ಶ್ರಮದಾನ ಕಾರ್ಯಕ್ರಮವನ್ನು ಶ್ರೀನಾಗ ಚೌಡೇಶ್ವರಿ ಸೇವಾ ಸಮಿತಿ, ಹಂಗಾರಖಂಡ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಮನ್ವಯದಿಂದ ಯಶಸ್ವಿಯಾಗಿ ನಡೆಸಿಕೊಟ್ಟರು. ಗ್ರಾಮಸ್ಥರ ಒಗ್ಗಟ್ಟು ಮತ್ತು ಸಾರ್ವಜನಿಕ ಸೇವಾಭಾವನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಂಗಾರಖಂಡ ಗ್ರಾಮವು ಸುತ್ತಮುತ್ತಲಿನ ಗ್ರಾಮಗಳಿಗೆ ಮಾತ್ರವಲ್ಲದೆ ಇಡೀ ಸಿದ್ದಾಪುರ ತಾಲೂಕಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ನಾಗ ಚೌಡೇಶ್ವರಿ ಸೇವಾ ಸಮಿತಿ ನೂತನ ಅಧ್ಯಕ್ಷ ಶ್ರೀ ವಿನಾಯಕ ಕೃಷ್ಣ ನಾಯ್ಕ, ಉಪಾಧ್ಯಕ್ಷ ಸುರೇಶ ಬಿ ನಾಯ್ಕ, ಖಜಾಂಚಿ ಸುಬ್ರಾಯ ಟಿ ನಾಯ್ಕ,ಕಾರ್ಯದರ್ಶಿ ಕು|ಪುನೀತ್ ಕುಮಾರ್ ಎನ್ ನಾಯ್ಕ,ಸಹಕಾರ್ಯದರ್ಶಿ ರವಿಕುಮಾರ ಎನ್ ನಾಯ್ಕ ಬಾಳೆಕೈ, ಮಹಾಬಲೇಶ್ವರ ಹೆಗಡೆ,ಪ್ರಕಾಶ್ ಜಿ ಹೆಗಡೆ, ನಾಗರಾಜ್ ರಾಮ ನಾಯ್ಕ , ರಮೇಶ್ ಟಿ ನಾಯ್ಕ, ವಾಸುದೇವ ಎನ್ ನಾಯ್ಕ್ , ಗಣೇಶ ಹೆಗಡೆ, ಜೀವನ ಹರೀಶ್ ನಾಯ್ಕ ,ಪ್ರದೀಪ್ ರಾ ನಾಯ್ಕ, ರಮೇಶ್ ಎನ್ ನಾಯ್ಕ ಬಾಳೆಕೈ, ಹನುಮ ನಾಯ್ಕ, ಅರುಣ್ ಕುಮಾರ್ ನಾಯ್ಕ , ನಟರಾಜ ಎಂ ಹೆಗಡೆ, ಸಂತೋಷ್ ನಾ ನಾಯ್ಕ , ಪ್ರಸನ್ನ ನಾ ಹೆಗಡೆ, ನಾರಾಯಣ ಜಿ ನಾಯ್ಕ , ರಾಜೇಶ್ವರ ನಾಯ್ಕ, ನರಸಿಂಹ ಡಿ ನಾಯ್ಕ, ನರೇಂದ್ರ ಎಂ ನಾಯ್ಕ, ಬಂಗಾರ್ಯ ಕೆ ನಾಯ್ಕ್ ,ಗಣಪತಿ ವಿ ಹೆಗಡೆ, ಪ್ರವೀಣ್ ನಾಯ್ಕ್ , ಮಹಾಬಲ ನಾಯ್ಕ,ಕುಮಾರ್ ಸುಶಾಂತ್ ಹೆಗಡೆ, ಇತರರಿದ್ದರು…..

