ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ತಾಲ್ಲೂಕಿನ ಶಿರಾಲಿಯಲ್ಲಿ ನಡೆದ ಕಪ್ಪೆಚಿಪ್ಪು ದುರಂತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆ ಇಡೀ ಜಿಲ್ಲೆಯನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಈ ದುರ್ಘಟನೆಯಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತವಾಗಿದ್ದ ಸಂದರ್ಭದಲ್ಲಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಮಾನವೀಯತೆ ಮೆರೆದಿದ್ದಾರೆ.
ದುರಂತದಲ್ಲಿ ಮೃತಪಟ್ಟ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿದ ಸಚಿವ ಮಂಕಾಳ ವೈದ್ಯ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಸರ್ಕಾರದಿಂದ ನೀಡಲಾಗುವ ಪರಿಹಾರದ ಜೊತೆಗೆ, ತಮ್ಮ ವೈಯಕ್ತಿಕ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡುವ ಮೂಲಕ ನೆರವಾಗಿದ್ದಾರೆ
ಇದಲ್ಲದೆ, ದುರಂತದಿಂದ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಸ್ವಂತ ಮನೆ ಇಲ್ಲದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ಐದು ಲಕ್ಷ ರೂಪಾಯಿ ವಿಶೇಷ ನೆರವು ಕೂಡ ನೀಡಿದರು.ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಶಿಕ್ಷಣ, ಜವಾಬ್ದಾರಿಯನ್ನು ತಾವು ಹೊರುವುದಾಗಿ ಘಟನೆ ದಿನವೂ ಸಹ ಘೋಷಣೆ ಮಾಡಿದ್ದರು,ಇವತ್ತು ಸಹ ಮತ್ತೊಮ್ಮೆ ಹೇಳಿದ್ದಾರೆ. ನಿಮ್ಮ ಸಂಕಷ್ಟದ ಸಮಯದಲ್ಲಿ ನಾನು ಮತ್ತು ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತೇವೆ” ಎಂದು ಭರವಸೆ ನೀಡಿದರು.
ಸಚಿವರ ಈ ಮಾನವೀಯ ನಡೆಗೆ ಭಟ್ಕಳದ ಜನತೆಯಷ್ಟೆ ಅಲ್ಲದೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಅದೆಷ್ಟೋ ದುರಂತ ನಡೆದಿದೆ..ಆದರೆ ಇಂದು ಮಂಕಾಳ ವೈದ್ಯ ಅವರು ನೆರವಿಗೆ ಬಂದಿರುವಂತೆ ಯಾರೂ ಸಹ ಅಂದಿನ ದಿನದಲ್ಲಿ ನೆರವಿಗೆ ಬಂದಿಲ್ಲ.ವೈದ್ಯ ಅವರ ಮಾನವೀಯತೆಗೆ ರಾಜ್ಯಾದ್ಯಂತ ಹೊಗಳಿಕೆಗೆ ಮಾತುಗಳು ಕೇಳಿರಲಾರಂಭಿಸಿದೆ. ಮಂಕಾಳ ವೈದ್ಯ ನೀಡಿದ ನೆರವು ಮತ್ತು ಬೆಂಬಲ ಮಾನವೀಯ ಮೌಲ್ಯಗಳ ಪ್ರತೀಕವಾಗಿ ಕಾಣಿಸಿಕೊಂಡಿದೆ .
ಇದನ್ನೂ ಓದಿ/JDS/ಜೆಡಿಎಸ್ ಯುವ ನಾಯಕಿಯಾಗಿ ಜಾಹ್ನವಿ ಎಂಟ್ರಿ:’ನೀವು ಶಾಸಕಿಯಾಗಬೇಕು’ ಎಂದ ನೆಟ್ಟಿಗರು

