ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹೇಳಿದ್ದ ಮಾತೊಂದು ಮತ್ತೆ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.
ಎಸ್. ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ಡಿ.ಕೆ. ಶಿವಕುಮಾರ್ ಅವರು ಜೈಲು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ನಾನು ಜೈಲು ಮಂತ್ರಿ ಆಗಿಯೇ ಮುಖ್ಯಮಂತ್ರಿ ಆಗಿದ್ದೇನೆ, ನೀನು ಈಗ ಜೈಲು ಮಂತ್ರಿಯಾಗಿದ್ದೀಯಾ ಮುಂದೊಂದು ದಿನ ನೀನು ಕೂಡ ರಾಜ್ಯದ ಮುಖ್ಯಮಂತ್ರಿ ಆಗ್ತಿಯಾ ಅಂತಾ ಡಿಕೆ ಶಿವಕುಮಾರ ಅವರಿಗೆ ಎಸ್ ಬಂಗಾರಪ್ಪ ಹೇಳಿದ್ದರಂತೆ,

ಈ ವಿಚಾರವನ್ನು ಸ್ವತಃ ಡಿ.ಕೆ. ಶಿವಕುಮಾರ್ ಅವರು ಹಲವು ವೇದಿಕೆಗಳಲ್ಲಿ ನೆನಪಿಸಿಕೊಂಡಿದ್ದರು, ಬಂಗಾರಪ್ಪ ಅವರು ತಮ್ಮ ಮೇಲೆ ವಿಶೇಷ ವಿಶ್ವಾಸ ಇಟ್ಟಿದ್ದರು ಎಂದು ಹೇಳಿಕೊಂಡಿದ್ದರು. ಇದೀಗ ರಾಜ್ಯ ರಾಜಕೀಯದಲ್ಲಿ ಡಿಕೆಶಿ ಮುಖ್ಯಮಂತ್ರಿ ಪಟ್ಟಕ್ಕೇರಲಿದ್ದಾರೆ ಎಂಬ ಚರ್ಚೆಗಳು ಗರಿಗೆದರಿರುವ ಹೊತ್ತಿನಲ್ಲಿ, ಬಂಗಾರಪ್ಪ ಅವರು ಹೇಳಿದ್ದ ಆ ಮಾತು ಮತ್ತೆ ಚರ್ಚೆ ಆಗುತ್ತಿದೆ.
ರಾಜಕೀಯ ಅನುಭವ, ಸಂಘಟನಾ ಶಕ್ತಿ ಮತ್ತು ಪಕ್ಷದೊಳಗಿನ ಪ್ರಭಾವದಿಂದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ, ಹಲವು ವರ್ಷಗಳ ಹಿಂದೆ ಬಂಗಾರಪ್ಪ ಹೇಳಿದ್ದ ಮಾತು ಇದೀಗ ನಿಜವಾಗುವ ಹಂತಕ್ಕೆ ಬಂದಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ/ಡಿಕೆಶಿ ಪ್ರಮಾಣವಚನಕ್ಕೆ ಮೂಹೂರ್ತ ಫಿಕ್ಸ್ ? ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ



