ಸುದ್ದಿಬಿಂದು ಬ್ಯೂರೋ‌ ವರದಿ
ಶಿರಸಿ : ನಗರದ ಅಶ್ವಿನಿ ಸರ್ಕಲ್ ಸಮೀಪದ ಬೆಳ್ಳಿಮನೆ ಕಟ್ಟಡದಲ್ಲಿ ಅನಧಿಕೃತವಾಗಿ ಕ್ಲಬ್ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕಟ್ಟಡದ ಎರಡನೇ ಮಹಡಿಯಲ್ಲಿ ಇರುವ ಒಂದು ಕೊಠಡಿಯನ್ನು ಕುಮಟಾದ ವೆಂಕಟೇಶ ನಾಯ್ಕ ಅವರು ಬಾಡಿಗೆಗೆ ಪಡೆದು ಜೂಜಾಟ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಈ ಸ್ಥಳದಲ್ಲಿ ಶಿವಮೊಗ್ಗದ ಹರೀಶಿ ಕ್ಲಬ್‌ಗೆ ಸಂಬಂಧಿಸಿದ ಭರತ್ ಬಂಗಾರಪ್ಪ ಮಡಿವಾಳ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆಟಗಾರರಿಗೆ ಬಣ್ಣ ಬಣ್ಣದ ಟೋಕನ್‌ಗಳನ್ನು ನೀಡಿ ಜೂಜಾಟ ನಡೆಸಲಾಗುತ್ತಿದೆ ಎನ್ನಲಾಗಿದೆ. ಈ ಚಟುವಟಿಕೆಯಲ್ಲಿ ಸ್ಥಳೀಯ ವ್ಯಾಪಾರಿ ರಮೇಶ್ ಶಿವಮೂರ್ತಿ ಹೊಂಬಾಳೆ ಸೇರಿದಂತೆ ಹಲವು ಮಂದಿ ಭಾಗಿಯಾಗಿರುವುದಾಗಿ ಹೇಳಲಾಗಿದೆ. ಜೊತೆಗೆ ವಿವಿಧ ಪ್ರದೇಶಗಳಿಂದ ಬಂದ ಕೆಲವರು ಸಹ ಟೋಕನ್ ಪಡೆದು ಈ ಜೂಜಾಟದಲ್ಲಿ ತೊಡಗಿರುವ ಮಾಹಿತಿ ದೊರೆತಿದೆ.

ಅಲ್ಲಿಗೆ ಆಗಮಿಸುವವರು ಮೊದಲು ಹಣ ನೀಡಿ ಟೋಕನ್‌ಗಳನ್ನು ಖರೀದಿಸಿ, ಬಳಿಕ ಅದನ್ನೇ ಬಳಸಿ ಆಟ ಆಡುತ್ತಿರುವುದಾಗಿ ತಿಳಿದುಬಂದಿದೆ.ಏಪ್ರಿಲ್ 19ರಂದು ಶಿರಸಿ ಮಾರುಕಟ್ಟೆ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಅನಧಿಕೃತ ಚಟುವಟಿಕೆ ನಡೆಸುತ್ತಿದ್ದವರನ್ನು ವಿಚಾರಣೆಗೊಳಪಡಿಸಿ, ಜೂಜಾಟದಲ್ಲಿ ಭಾಗಿಯಾದ ಕೆಲವರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ/ಅಲ್ಲಿನ 2ನೇ ಮಹಡಿಯಲ್ಲಿರುವ ಕೊಠಡಿಯನ್ನು ಕುಮಟಾದ ವೆಂಕಟೇಶ ನಾಯ್ಕ ಅವರು ಬಾಡಿಗೆಪಡೆದಿದ್ದು, ಜೂಜಾಟ ನಡೆಸುತ್ತಿದ್ದಾರೆ.