ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕನ್ನಡ ವೈಶ್ಯ ಸಮಾಜ ಅಮದಳ್ಳಿ ಇವರ ಆಶ್ರಯದಲ್ಲಿ ವೈಶ್ಯ ಸಮಾಜ ಬಾಂಧವರಿಗಾಗಿ ಶ್ರೀ ಬಂಟದೇವ ಕಪ್ 2026 ಹಾರ್ಡ್ ಟೆನ್ನಿಸ್ ಕ್ರಿಕೆಟ್ ಟೂರ್ನಾಮೆಂಟ್, ಸೀಸನ್ 1 ನ್ನು ಅಮದಳ್ಳಿಯ ಕಂತ್ರಿವಾಡ, ಬಂಟದೇವ ಕ್ರಿಕೆಟ್ ಮೈದಾನದಲ್ಲಿ ಏ.25 ಹಾಗು ಏ.26 ರಂದು ನಡೆಯಲಿದೆ.

ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 44,444 ರು. ದ್ವಿತೀಯ ಬಹುಮಾನ 22,222 ರು. ತೃತೀಯ ಬಹುಮಾನ‌ 7,777 ರು. ಹಾಗೂ ಆಕರ್ಷಕ ಟ್ರೋಫಿ ಇರಲಿದೆ. ಈ ಕ್ರೀಡಾಕೂಟದಲ್ಲಿ ಬೆಂಗಳೂರು, ಹುಬ್ಬಳ್ಳಿ, ಅಂಕೋಲಾ, ಕಾರವಾರ ಮುಂತಾದ ಕಡೆಗಳಿಂದ ಸುಮಾರು 10 ಬಲಿಷ್ಠ ತಂಡಗಳು ಸೆಣೆಸಾಡಲಿವೆ. ಆಯೋಜಕರು ಈ ರೋಚಕ ಪಂದ್ಯಾವಳಿಯ ಯಶಸ್ಸಿಗಾಗಿ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಅದ್ಧೂರಿ ಕ್ರೀಡಾ ಹಬ್ಬಕ್ಕೆ ಎಲ್ಲಾ ವೈಶ್ಯ ಸಮಾಜ ಬಾಂಧವರು, ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ/Accident News /ಭೀಕರ ರಸ್ತೆ ಅಪಘಾತ : ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು