ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ರೈತರು ಹಾಗೂ ಸಾಮಾನ್ಯ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಆರಂಭಿಸಲಾದ ಯಶಸ್ವಿನಿ ಆರೋಗ್ಯ ಯೋಜನೆ ಇದೀಗ ವಿವಾದದ ಕೇಂದ್ರಬಿಂದುವಾಗುತ್ತಿದೆ. ಹಣ ಕೊಟ್ಟರೂ ಚಿಕಿತ್ಸೆ ಇಲ್ಲದಂತಾಗಿದೆ.

ಪತ್ರಿವರ್ಷ ಹಣ ಸಂಗ್ರಹ ಮಾಡಿದ್ದರು,ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ಕಾರ್ಡ್ ಮಾನ್ಯ ಇಲ್ಲವಾಗಿದ್ದು, ಹಣ ತುಂಬಿದರು ಈ ಯೋಜನೆಯಿಂದ ಜನರಿಗೆ ಯಾವುದೆ ಪ್ರಯೋಜನ ಇಲ್ಲದಂತಾಗಿದೆ. ಇದು ಅತೀ ದೊಡ್ಡ ಹಗರಣ ಎನ್ನಲಾಗುತ್ತಿದೆ.ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ರಾಜ್ಯದಲ್ಲಿ ಲಕ್ಷಾಂತರ ಮಂದಿ ಯಶಸ್ವಿನಿ ಆರೋಗ್ಯ ಕಾರ್ಡ್ ಮಾಡಿಸಿಕೊಂಡಿದ್ದರೂ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೆ “ನಮ್ಮಲ್ಲಿ ಯಶಸ್ವಿನಿ ಲಭ್ಯವಿಲ್ಲ” ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಈ ಬಗ್ಗೆ ನಾಮಫಲಕಗಳೇ ಅಳವಡಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಗ್ರಾಮೀಣ ಭಾಗದಲ್ಲಿ ರೈತ ಸೇವಾ ಸಹಕಾರಿ ಸಂಘಗಳು ಹಾಗೂ ಕೆಲ ಸಹಕಾರಿ ಬ್ಯಾಂಕ್‌ಗಳ ಮೂಲಕ ಪ್ರತಿ ವರ್ಷ ಒಂದೊಂದು ಕುಟುಂಬದಿಂದ 500 ವರೆಗೆ ಹಾಗೂ ನಗರ ಪ್ರದೇಶದ ಜನರಿಂದ 1000 ವರೆಗೆ ಹಣ ವಸೂಲಿಸಲಾಗುತ್ತಿದೆ. ಪ್ರತಿ ವರ್ಷವೂ ನವೀಕರಣ ಹೆಸರಿನಲ್ಲಿ ಹಣ ಸಂಗ್ರಹವಾಗುತ್ತಿದ್ದರೂ, ತುರ್ತು ಸಮಯದಲ್ಲಿ ಚಿಕಿತ್ಸೆ ಈ ಕಾರ್ಡ್‌ನಿಂದ ಯಾವುದೇ ಲಾಭ ಇಲ್ಲದಂತಾಗಿದೆ..

ಆಸ್ಪತ್ರೆಗಳಿಗೆ ಹಣ ನೀಡದ ಸರಕಾರ
ಯಶಸ್ವಿನಿ ಯೋಜನೆಗಾಗಿ ರಾಜ್ಯದ ಸಹಕಾರಿ ಸಂಘಸಂಸ್ಥೆಗಳು ಹಾಗೂ ಕೆಲವು ಕೋಅಪರೇಟಿವ್ ಬ್ಯಾಂಕ್‌ಗಳ ಮೂಲಕ ಜನರಿಂದ ಸಂಗ್ರಹಿಸಿದ್ದ ಹಣವನ್ನ ಸರಿಯಾಗಿ ಆಸ್ಪತ್ರೆಗಳಿಗೆ ನೀಡುತ್ತಿಲ್ಲ. ಯಶಸ್ವಿನಿ ಕಾರ್ಡ್ ಯೋಜನೆಯಡಿಯಲ್ಲಿ ರಾಜ್ಯದ ಅನೇಕ‌ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಇದರ‌ ಹಣವನ್ನ ಯಶಸ್ವಿನಿ ಯೋಜನೆಯಡಿಯಲ್ಲಿ ಸರಕಾರ ಆಯಾ ಆಸ್ಪತ್ರೆಗಳಿಗೆ ಹಣ ಜಮಾ ಮಾಡಬೇಕಿತ್ತು.‌ಆದರೆ ಅದೆಷ್ಟೋ ಆಸ್ಪತ್ರೆಗಳಿಗೆ ಇದುವರಗೆ ಸರಕಾರ ಹಣ ನೋಡದೆ ಇರೋ ಕಾರಣಕ್ಕಾಗಿ ಇದೀಗ ರಾಜ್ಯದ ಬಹುತೇಕ ಆಸ್ಪತ್ರೆಗಳು ಸರಕಾರದ ಈ ಯಶಸ್ವಿನಿ  ಯೋಜನೆಯನ್ನ ತೆಗೆದುಕೊಳ್ಳು ಯಾವ ಆಸ್ಪತ್ರೆಗಳು ಮುಂದೆ ಬರುತ್ತಿಲ್ಲ.

ಆದರೂ ಸಹ ಸರಕಾರ ಪ್ರತಿವರ್ಷ ಯಶಸ್ವಿ ಯೋಜನೆಗಾಗಿ ಜನರಿಂದ ಹಣ ಸಂಗ್ರಹಿಸುತ್ತಲೆ‌‌ ಇದೆ.‌ ಆದರೆ ರಾಜ್ಯದ ಜನರಿಂದ ಸಂಗ್ರಹಿಸಲಾಗುವ ಕೋಟಿ ಕೋಟಿ ಹಣ ಆಸ್ಪತ್ರೆಗೂ ಜಮಾ ಆಗದೆ “ಕಾರ್ಡ್ ಇದ್ದರೂ ಚಿಕಿತ್ಸೆ ಸಿಗುವುದಿಲ್ಲ, ಹೀಗಾಗಿ ನಾವು ಕಟ್ಟುತ್ತಿರುವ ಹಣ ಎಲ್ಲಿಗೆ ಹೋಗುತ್ತಿದೆ?” ಎಂದು ರಾಜ್ಯದ ಜನ ಪ್ರಶ್ನೆ ಮಾಡುವಂತಾಗಿದೆ ಹಲವು ವರ್ಷಗಳಿಂದಲೇ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲವೆಂಬ ಆರೋಪಗಳು ಕೇಳಿಬರುತ್ತಿದ್ದರೂ, ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಸರ್ಕಾರ ಯೋಜನೆಗಾಗಿ ಹಣ ಸಂಗ್ರಹಿಸುತ್ತಿದ್ದರು, ಅದರ ಪ್ರಯೋಜನ ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಸರಕಾರವೇ ಸ್ಪಷ್ಟನೆ ನೀಡಬೇಕಿದೆ.

ಯಶಸ್ವಿನಿ ಆರೋಗ್ಯ ಯೋಜನೆ ನಿಜಕ್ಕೂ ಜನರಿಗೆ ಉಪಯೋಗವಾಗುತ್ತಿದೆಯೇ ಅಥವಾ ಕೇವಲ ಹಣ ಸಂಗ್ರಹದ ಸಾಧನವಾಗಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಇದನ್ನೂ ಓದಿ/ಮಲೆನಾಡಿ‌ನ ಕೆರೆ ಭೇಟೆ ಸಂಭ್ರಮ:ನೋಡೋಕೆ ಚೆಂದ