ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ: ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ರಾಫ್ಟಿಂಗ್ ದರ (ರೇಟ್) ವಿಚಾರವಾಗಿ ಜಟ್ಟಿದಾರರು ಹಾಗೂ ರೆಸಾರ್ಟ್, ಹೋಂಸ್ಟೇ ಮಾಲೀಕರು ಮತ್ತು ಏಜೆಂಟರ ನಡುವೆ ತೀವ್ರ ವಾಗ್ವಾದ ಉಂಟಾಗಿ, ಅದು ಮಾರಾಮಾರಿಗೆ ತಿರುಗಿದ ಘಟನೆ ನಡೆದಿದೆ.

ಗಣೇಶಗುಡಿ ರಾಫ್ಟಿಂಗ್ ಕೇಂದ್ರಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಇತ್ತೀಚೆಗೆ ಜಟ್ಟಿದಾರರು ರಾಫ್ಟಿಂಗ್ ದರವನ್ನು ಏರಿಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ದಾಂಡೇಲಿ ಭಾಗದ ಕೆಲವು ರೆಸಾರ್ಟ್ ಹಾಗೂ ಹೋಂಸ್ಟೇ ಮಾಲೀಕರು ಸರ್ಕಾರ ನಿಗದಿಪಡಿಸಿದ ದರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜೋಯಿಡಾ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರು.

ಈ ವಿಷಯದ ಕುರಿತು ಸ್ಪಷ್ಟನೆ ಪಡೆಯಲು ರಾಫ್ಟಿಂಗ್ ಬುಕ್ಕಿಂಗ್ ಕೌಂಟರ್‌ಗೆ ತೆರಳಿದ ವೇಳೆ, ಎರಡು ಗುಂಪುಗಳ ನಡುವೆ ಮೊದಲು ಮಾತಿನ ಚಕಮಕಿ ನಡೆದು, ನಂತರ ಕೈಯಾಕೈ ಮಿಲಾಯಿಸಿಕೊಂಡಿರುವ ಪ್ರಸಂಗ ಸಹ ನಡೆದಿದೆ.

ರಾಮನಗರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಸ್ಥಳೀಯ ಪ್ರವಾಸೋದ್ಯಮ ವಲಯದಲ್ಲಿ ಈ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಸಂಬಂಧಿತ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ..

ಇದನ್ನೂ ಓದಿ/Hailstorm/ಮುಂಡಗೋಡ–ಕಲಘಟಗಿ ಭಾಗದಲ್ಲಿ ಆಲಿಕಲ್ಲು ಸುರಿಮಳೆ: ಜನಜೀವನ ಅಸ್ತವ್ಯಸ್ತ