ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಘೋಷಣೆ ಮಾಡಿರುವುದು ಜಿಲ್ಲೆಯ ಜನರಲ್ಲಿ ಆಶಾಭಾವನೆ ಮೂಡಿಸಿದೆ. ಆದರೆ ಈ ಆಸ್ಪತ್ರೆಯನ್ನು ಜಿಲ್ಲೆಯ ಮಧ್ಯವರ್ತಿ ಸ್ಥಳವಾಗಿರುವ ಕುಮಟಾ ತಾಲೂಕಿನಲ್ಲೇ ಆಗಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ಸುಲಭವಾಗಿ ತಲುಪಬಹುದಾದ ಕೇಂದ್ರಸ್ಥಾನವಾಗಿರುವ ಕುಮಟಾವೇ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಸ್ಥಳ ಎಂಬುದು ಹೋರಾಟಗಾರರು ಸೇರಿದಂತೆ‌ ಪ್ರತಿಯೊಬ್ಬರ  ಅಭಿಪ್ರಾಯ‌ ಕೂಡ ಆಗಿದೆ.. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಚರ್ಚೆಯಾಗಿದ್ದಾಗ ಜಿಲ್ಲೆಯ ಮಧ್ಯವರ್ತಿ ಸ್ಥಳವಾಗಿರುವ ಕುಮಟಾ ತಾಲೂಕಿನ ಮಿರ್ಜಾನ್ ಸಮೀಪ ಜಾಗವನ್ನು ಗುರುತಿಸಲಾಗಿತ್ತು ಎನ್ನುವುದು ಸರಕಾರಕ್ಕೂ ಗೊತ್ತಿರುವ ವಿಚಾರ

ಈ ಆಸ್ಪತ್ರೆಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುವ ಅಭಿಯಾನವೂ ಕೂಡ ಕುಮಟಾ ಜನತೆಯಿಂದಲ್ಲೆ ಆರಂಭಗೊಂಡಿರುವುದನ್ನ ಮರೆಯಬಾರದು. ಅಲ್ಲದೇ ರಕ್ತದಾನ ಅಭಿಯಾನ ಸೇರಿದಂತೆ ಹಲವು ರೀತಿಯ ಹೋರಾಟಗಳನ್ನ ನಡೆಸಲಾಗಿದೆ. ಆಸ್ಪತ್ರೆಗಾಗಿ ಕುಮಟಾ ಜನತೆಗೆ ನಡೆಸಿದ ಪ್ರತಿಯೊಂದು ಹೋರಾಟಗಳು ರಾಜ್ಯಮಟ್ಟ ಸುದ್ದಿವಾಹಿನಿಗಳ ಮೂಲಕ ಸರಕಾರಕ್ಕೆ ಮುಟ್ಟುವಂತೆ ಮಾಡಿರೋದನ್ನ ಯಾರೂ ಕೂಡ ಮರೆಯುವಂತಿಲ್ಲ

ಇದಲ್ಲದೆ ಕುಮಟಾದಲ್ಲಿ ಈಗಾಗಲೇ ಸುಸಜ್ಜಿತ ಸರಕಾರಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಸದ್ಯದಲ್ಲೇ ಇಲ್ಲಿ ಟ್ರಾಮಾ ಸೆಂಟರ್ ಸಹ ಆರಂಭವಾಗಲಿದೆ. ಈ ಹಿನ್ನೆಲೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯನ್ನು ಕೂಡ ಕುಮಟಾದಲ್ಲೇ ನಿರ್ಮಿಸಿದರೆ ಮೂಲಸೌಕರ್ಯಗಳ ಸಮರ್ಪಕ ಬಳಕೆ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಸಾಮೂಹಿಕವಾಗಿ ವ್ಯಕ್ತವಾಗುತ್ತಿದೆ..

ಕುಮಟಾದಲ್ಲಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆಯಾದರೆ ಅಂಕೋಲಾ, ಹೊನ್ನಾವರ, ಭಟ್ಕಳ, ಸಿದ್ದಾಪುರ ಹಾಗೂ ಶಿರಸಿ ಸೇರಿದಂತೆ ಜಿಲ್ಲೆಯ ಹಲವಾರು ಭಾಗಗಳ ಜನತೆಗೆ ಹೆಚ್ಚಿನ ಆರೋಗ್ಯ ಸೇವೆ ಸುಲಭವಾಗಿ ದೊರೆಯಲಿದೆ. ಈ ಕಾರಣದಿಂದ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸ ಬೇಕಿದೆ.ಈ ಹೋರಾಟದ ಹಿಂದೆ ಕನ್ನಡ ಪರ ಸಂಘಟನೆಗಳು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೆ ಸಾಮಾಜಿಕ ಜಾಲತಾಣದ ನಮ್ಮ UK, ಯುಕೆ ಎಕ್ಸ್‌ಪ್ರೆಸ್, ಸೇರಿದಂತೆ ಬಹುತೇಕ ಸಾಮಾಜಿಕ ಜಾಲತಾಣಗಳು ಈ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಾಗಿ ನಡೆಸಿದ ಪ್ರತಿಯೊಂದು ಅಭಿಯಾನದ ಫಲವಾಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೇರಿದಂತೆ ಜಿಲ್ಲೆಯಲ್ಲಿರುವ ಪ್ರತಿಯೊಬ್ಬ ಶಾಸಕರ ಪ್ರಯತ್ನದಿಂದಾಗಿ  ಸರಕಾರ ಇಂದು ಉತ್ತರ ಕನ್ನಡ ಜಿಲ್ಲೆಗೆ 100ಕೋಟಿ ಅನುದಾನ ಘೋಷಣೆ ಮಾಡಿದೆ.

ಹೀಗಾಗಿ ಇದನ್ನ ಜಿಲ್ಲೆಯ ಜನತೆಯ ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಜಿಲ್ಲೆಯ ಮದ್ಯವರ್ತಿ ಸ್ಥಳವಾಗಿರುವ ಕುಮಟಾದಲ್ಲೆ ನಿರ್ಮಾಣ ಮಾಡಬೇಕಾಗಿದೆ.. ಈ ಒಂದು ವಿಚಾರದಲ್ಲಿ ಯಾವುದೇ ರಾಜಕೀಯ ಆಗದೆ. ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣ ಆಗುವ ಮೂಲಕ ಇನ್ನಷ್ಡು ಮಧ್ಯಮ ಹಾಗೆ ಬಡ ಜನರಿಗೆ ಅನುಕೂಲಕರವಾಗಲಿ ಅನ್ನೊಂದು ಪ್ರತಿಯೊಬ್ಬರ ಆಶೆಯವಾಗಿದೆ..

ಇದನ್ನೂ ಓದಿ‌/ನಗರದ ಮಧ್ಯೆ ಮೊಸಳೆ ಸಂಚಾರ: ದಾಂಡೇಲಿ ಪಂಪಾಸು ನಿವಾಸಿಗಳಲ್ಲಿ ಭೀತಿಯಲ್ಲಿ