ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಜಿಲ್ಲೆಯಲ್ಲಿ ಮೊದಲ ಬಾರಿಗೆ ರೋಟರಿ ಕ್ಲಬ್ ಆಫ್ ಕಾರವಾರ ಪಶ್ಚಿಮ ವತಿಯಿಂದ, ಐಡಿಬಿಐ ಬ್ಯಾಂಕ್ ಕಾರವಾರ ಶಾಖೆಯ ಸಹಯೋಗದಲ್ಲಿ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ನಿಧಿಯ ಮೂಲಕ ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಸುಮಾರು ರೂ. 3 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಗೆ ಅಗತ್ಯವಿದ್ದ ವಾಷ್ಪ ಚಿಕಿತ್ಸೆ ಯಂತ್ರ (ಸ್ಟೀಮರ್), ಪಂಚಕರ್ಮ ಮಸಾಜ್ ಮಂಚ ಹಾಗೂ ಬಸ್ತಿ ಚಿಕಿತ್ಸಾ ಯಂತ್ರಗಳನ್ನು ಅಧಿಕೃತವಾಗಿ ನೀಡಲಾಯಿತು. ಈ ಉಪಕರಣಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು,ಪಂಚಕರ್ಮ ಚಿಕಿತ್ಸಾ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ರೋ. ಅಧ್ಯಕ್ಷ ಅಕ್ಷಯ ಅವರು ಅಧ್ಯಕ್ಷತೆ ವಹಿಸಿದ್ದರು. ರೋ. ಖಜಾಂಚಿ ರತ್ನಾಕರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.ಮುಖ್ಯ ಅತಿಥಿಯಾಗಿ ಐಡಿಬಿಐ ಬ್ಯಾಂಕ್ ಕಾರವಾರ ಶಾಖೆಯ ವ್ಯವಸ್ಥಾಪಕರಾದ ಪ್ರಸನ್ನ ಭಟ್ ಉಪಸ್ಥಿತರಿದ್ದರು. ವಿಶೇಷ ಅತಿಥಿಗಳಾಗಿ Rtn DGN ಅಶೋಕ್ ನಾಯ್ಕ ಹಾಗೂ ಡಾ. ಪ್ರವೀಣ್ ಮತ್ತು ಸಂಜೀವ ಅವರು ಭಾಗವಹಿಸಿ ಸಂಸ್ಥೆಯ ಸಾಮಾಜಿಕ ಕಾಳಜಿಯನ್ನು ಪ್ರಶಂಸಿಸಿದರು.
ಇವೆಂಟ್ ಸಂಯೋಜಕರಾಗಿ ರೋ. ಪ್ರೀತಮ್ ಕಾರ್ಯನಿರ್ವಹಿಸಿದರು. ರೋ. ಕಾರ್ಯದರ್ಶಿ ಧರ್ಮೇಶ್, ರೋ. ದಿನೇಶ್, ರೋ. ಲಕ್ಷ್ಮೀಕಾಂತ್, ರೋ. ಡೆಮಿ, ರೋ. ಪ್ರಜ್ಞಾ, ರೋ. ರಾಜು ಪಾಟೀಲ್, ರೋ. ಮಹಬೂಬ್, ರೋ. ಅರವಿಂದ್, ರೋ. ಜಿತೇಂದ್ರ ಹಾಗೂ ರೋ. ನಿತಿನ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ಸಮಾಜಮುಖಿ ಕಾರ್ಯಗಳ ಮೂಲಕ ಆರೋಗ್ಯ ಕ್ಷೇತ್ರಕ್ಕೆ ನೆರವು ನೀಡುತ್ತಿರುವ ಕ್ಲಬ್ನ ಈ ಪ್ರಯತ್ನವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ/ಸಿಎಂ ಸುಟ್ಕೇಸ್ನಲ್ಲಿ ಏನು ಸರ್ಪ್ರೈಸ್ :ರಾಜ್ಯ ಬಜೆಟ್ಗೆ ಕ್ಷಣಗಣನೆ



