ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಅಂಕೋಲಾ ತಾಲೂಕಿನ ಮಂಜುಗುಣಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾದ ಘಟನೆಯೊಂದು ನಡೆದಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕುಮಟಾ ಬಿಜೆಪಿ ಶಾಸಕ ದಿನಕರ ಶೆಟ್ಟಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಕಾಂಗ್ರೆಸ್ ಬರಬೇಡಿ ಅಲ್ಲೇ ಇರಿ” ಎಂದು ಹಾಸ್ಯಭರಿತವಾಗಿ ಹೇಳಿದ್ದರು. ಇದರಿಂದ  ಕಾರ್ಯಕರ್ತರಲ್ಲಿ ಕುತೂಹಲ ಹೆಚ್ಚಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ, “ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಆದರೆ ನಾನು ಕಾಂಗ್ರೆಸ್ ಸೇರುವುದಿಲ್ಲ. ಬಿಜೆಪಿಯಲ್ಲೇ ನಾನು ಆರಾಮಾಗಿದ್ದೇನೆ. ಈ ಹಿಂದೆ ನಾನು ಜೆಡಿಎಸ್‌ನಲ್ಲಿ ಶಾಸಕನಾಗಿದ್ದಾಗ ಬಿಜೆಪಿಯಿಂದ ಆಹ್ವಾನ ಬಂದಿತ್ತು.ಆಗ ಪಕ್ಷ ಬಿಟ್ಟಿಲ್ಲ. ಆದರೆ ಈಗ ಸಹ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ನನಗೆ ಅನುಧಾನ ಕಡಿಮೆಯಾಗಿ ಬಂದರೂ ಪರವಾಗಿಲ್ಲ, ಬಿಜೆಪಿಯನ್ನ ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಶಾಸಕರ ಈ ಹೇಳಿಕೆಯಿಂದ, ಕಾಂಗ್ರೆಸ್ ಬಿಜೆಪಿ ಶಾಸಕ ದಿನಕರ ಗಾಳ ಹಾಕುತ್ತಿಯಾ.‌ಅಥವಾ ಶಾಸಕರೆ ಕ್ರಾಂಗ್ರೇಸ್‌ಗೆ ಹೋಗೊದಕ್ಕೆ ತೆರೆಮರೆಯಲ್ಲಿ ಕಸರತ್ತು ನಡೆಸ್ತಿದ್ದಾರ ಎನ್ನುವ ಚರ್ಚೆ ಕೂಡ ಕೇಳಿ ಬರತ್ತಿದೆ..ಅವರು ತಮ್ಮ ಹೇಳಿಕೆಯನ್ನ ಸ್ಪಷ್ಟ ಪಡಿಸಿದ್ದು, ಯಾವ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಹೋಗಲ್ಲ‌ ಎಂದಿದ್ದಾರೆ.

ಇದನ್ನೂ ಓದಿ/ಕ್ಯಾಮರಾ ಆರ್ಡರ್… ಕೈಗೆ ಬಂದಿದ್ದು ವಾಷಿಂಗ್ ಪೌಡರ್! ಆನ್‌ಲೈನ್ ಶಾಪಿಂಗ್‌ನಲ್ಲಿ ಅಚ್ಚರಿಯ ವಂಚನೆ