ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ : ಬಿಗ್ ಬಾಸ್ ಖ್ಯಾತಿಯ. ಕ್ಷಿತಾ ಶೆಟ್ಟಿ ಮುರುಡೇಶ್ವರದಲ್ಲಿ ನಡೆದ ಶಿವರಾತ್ರಿ ಜಾಗರಣೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಗೀತೆಯೊಂದನ್ನು ತಪ್ಪಾಗಿ ಹಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕನ್ನಡರಿಗರನ್ನ ಕೆರಳಿಸುವಂತೆ ಮಾಡಿದೆ.
ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ನಿರೂಪಿಸಿದ್ದು, ಮಂಗಳೂರು ಬೆಡಗಿ ರಕ್ಷಿತಾ ಶೆಟ್ಟಿ ‘ಸೇವಂತಿಯೇ… ಸೇವಂತಿಯೇ’ ಎಂಬ ಜನಪ್ರಿಯ ಕನ್ನಡ ಹಾಡನ್ನು ಅಕುಲ್ ಬಾಲಾಜಿಯವರೊಂದಿಗೆ ಹಾಡಿದರು. ಈ ವೇಳೆ “ಮಲ್ಲಿಗೆಗಿಂತ ಸೌಗಂಧ ನೀನು” ಎಂಬ ಸಾಲಿನ ಬದಲಾಗಿ “ಮಲ್ಲಿಗೆಗಿಂತ ಹನುಮಂತ ನೀನು” ಎಂದು ಹಾಡುವ ಮೂಲಕ ಪ್ರೇಕ್ಷಕರ ಒಮ್ಮೆ ಬೆಚ್ಚಿಬಿಳಿಸುವಂತ ಮಾಡಿದರು.
ಅಕುಲ್ ಬಾಲಾಜಿ ಹಾಡಿನ ಸರಿಯಾದ ಸಾಲನ್ನು ಹೇಳಿಕೊಡುವ ಪ್ರಯತ್ನ ಮಾಡಿದರೂ, ರಕ್ಷಿತಾ ಶೆಟ್ಟಿ ಐದಕ್ಕೂ ಹೆಚ್ಚು ಬಾರಿ ಅದೇ ಸಾಲನ್ನು ತಪ್ಪಾಗಿ ಹಾಡಿದರು. ಇದರಿಂದ ಪ್ರೇಕ್ಷಕರ ನಗೆಗಡಲಲ್ಲಿ ತೇಲಿದ ದೃಶ್ಯ ಕಂಡುಬಂತು. ಕೊನೆಗೂ ಹಲವು ಪ್ರಯತ್ನಗಳ ನಂತರ ‘ಸೇವಂತಿಯೇ… ಸೇವಂತಿಯೇ’ ಹಾಡನ್ನು ಸರಿಯಾಗಿ ಹಾಡಿಸಲು ಅಕುಲ್ ಬಾಲಾಜಿ ಯಶಸ್ವಿ ಆದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗತ್ತಿದೆ.



