ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ :  ತಾಲೂಕಿನ ಅವರಗುಪ್ಪಾ ಗ್ರಾಮದಲ್ಲಿ ನಡೆದ ವಸಂತ್ ನಾಯ್ಕ್ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು,ಮಹೇಶ ನಾಯ್ಕ ಕೊಲೆ‌ ಮಾಡಲು ಮೂರು ತಿಂಗಳ ಹಿಂದೆ ಸಂಚುರೂಪಿಸಲಾಗಿತ್ತು ಎನ್ನುವುದು ಮಹೇಶ‌ ನಾಯ್ಕ‌ ಮಗಳ ಹೇಳಿಕೆಯಿಂದ‌ ಬಹಿರಂಗವಾದಂತಿದೆ.

ಪ್ರಕರಣದ ತನಿಖೆಯಲ್ಲಿ, ಸುಚಿತ್ರಳ ಪತಿ ಮಹೇಶ್ ನಾಯ್ಕ್‌ನ ಕೊಲೆ ಮಾಡಲು ಸುಚಿತ್ರ ಹಾಗೂ ಕಮಲಾಕರ ಭಟ್ ಮೂರು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಸಂಚಿನ ಕುರಿತು ಸುಚಿತ್ರಳ ಮಗಳು ನೀಡಿರುವ ಹೇಳಿಕೆ ಸಾಕಷ್ಟು ಮಹತ್ವದ ಪಡೆದುಕೊಂಡಿದೆ, ಮಹೇಶ್ ನಾಯ್ಕ್ ಹತ್ಯೆ ಗುರಿಯಾಗಿದ್ದರೂ, ಆತ ಅದೃಷ್ಟವಶಾತ್ ಬಚಾವ್ ಆಗಿದ್ದು, ತಮ್ಮನನ್ನು ರಕ್ಷಿಸಲು ಹೋಗಿದ್ದ ಅಣ್ಣ ವಸಂತ್ ನಾಯ್ಕ್‌ ಘಟನೆಯಲ್ಲಿ ಕೊಲೆಯಾಗಿದ್ದಾನೆ.

ಇನ್ನು, ಕಳೆದ ನಾಲ್ಕೈದು ತಿಂಗಳಿಂದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರ ಒಟ್ಟಿಗೆ ವಾಸವಿದ್ದ ವಿಚಾರವನ್ನೂ ಕೂಡ ಆಕೆಯ ಮಗಳು ಹೇಳಿಕೊಂಡಿದ್ದಾಳೆ. ಈ ಅವಧಿಯಲ್ಲಿ ಸುಚಿತ್ರಳ ಮಗಳ ಮೇಲೆ ಹಿಂಸಾಚಾರ ನಡೆಸಲಾಗುತ್ತಿರುವ ಬಗ್ಗೆ ಆಕೆಯ ಮಗಳೆ ಸಿದ್ದಾಪುರ ಪೊಲೀಸರಿಗೆ ಹೇಳಿಕೆ‌‌ ನೀಡಿದ್ದಾಳೆ. ಕಮಲಾಕರ ಭಟ್‌ನ ಕುಮ್ಮಕ್ಕಿನಿಂದಲೇ ಕೊಲೆ ಸಂಚು ರೂಪಿಸಲಾಗಿತ್ತು. ಇಬ್ಬರೂ ಸೇರಿ ಕೊಲೆ ಸಂಚುರೂಪಿಸುತ್ತಿರುವ ಬಗ್ಗೆ ಸಾಕಷ್ಟು ಭಾರೀ ಮನೆಯಲ್ಲಿ ಮಾತುಕತ ನಡೆಸಿರುವ ಬಗ್ಗೆ ಸುಚಿತ್ರ ಮಗಳೆ ಹೇಳಿಕೊಂಡಿದ್ದಾಳೆ.

ಇದೆ ವಿಚಾರವನ್ನ ಮಹೇಶ್ ನಾಯ್ಕ್ ಹಾಗೂ ಅವರ ಮಗಳು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಪ್ರಕರಣದಲ್ಲಿ ಕೊಲೆ ಸಂಚು ರೂಪಿಸಿದ ಪ್ರಮುಖ ವ್ಯಕ್ತಿಯಾಗಿ ಜ್ಯೋತಿಷಿ ಕಮಲಾಕರ ಭಟ್‌ಗೆ A_4 ಆರೋಪಿಯ ಸ್ಥಾನ ನೀಡಲಾಗಿದೆ. ಅಲ್ಲದೆ, ಕೊಲೆ ನಡೆದ ಸಮಯದಲ್ಲಿ ಸ್ಥಳದಲ್ಲಿದ್ದ ಸುಚಿತ್ರಳ ತಂದೆಯನ್ನು A_2 ಆರೋಪಿಯಾಗಿ ಪೊಲೀಸರು ಗುರುತಿಸಿದ್ದಾರೆ.

ಆದರೆ, ಜ್ಯೋತಿಷಿ ಕಮಲಾಕರ ಭಟ್‌ನ ಪ್ರಭಾವಕ್ಕೆ
ಪೊಲೀಸರು ಒಳಗಾಗಿದ್ದಾರಾ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿದ್ದು, A_4 ಆರೋಪಿಯಾಗಿ ಮಾತ್ರ ಕಮಲಾಕರ ಭಟ್‌ಗೆ ಸ್ಥಾನ ನೀಡಿರುವುದೇ ಸಾಕೆ? ಎಂಬ ಅನುಮಾನಗಳು ಸಿದ್ದಾಪುರ ಗಲ್ಲಿಗಲ್ಲಿಯಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಈ ಪ್ರಕರಣದಲ್ಲಿ ಕಮಲಾಕರ ಭಟ್‌ಗೆ ಪ್ರಮುಖ ಆರೋಪಿ ಸ್ಥಾನ ನೀಡಬೇಕು ಹಾಗೂ ಎಲ್ಲಾ‌ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ/ಟಿವಿ ಪರದೆಯಿಂದ ಕಂಬಿಹಿಂದೆ : ಜ್ಯೋತಿಷಿ ಕಮಲಾಕರ ಭಟ್‌, ಸೇರಿ ಏಳುಮಂದಿಗೆ ನ್ಯಾಯಾಂಗ ಬಂಧನ