ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ : ತಾಲ್ಲೂಕಿನ ಅವರಗುಪ್ಪಾ ಗ್ರಾಮದಲ್ಲಿ ನಡೆದ ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಿನದಿಂದ ದಿನಕ್ಕೆ ಹೊಸ ಸಂಶಯಗಳು ಮೂಡುತ್ತಿವೆ. ಸುಚಿತ್ರಳ ರಾಸಲೀಲೆಯನ್ನು ಕಣ್ಣಾರೆ ಕಂಡ ಮಗಳನ್ನು ಕೊಲೆ ಮಾಡುವ ಸಂಚು ರೂಪಿಸಲಾಗಿತ್ತು ಎನ್ನುವ ಮಾತುಗಳು ಇದೀಗ ಕೇಳಿಬರುತ್ತಿವೆ.
ಈ ಕೊಲೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸುಚಿತ್ರಳ ಮಗಳು ನೀಡಿದ ಹೇಳಿಕೆಯಲ್ಲಿ ಸಾಕಷ್ಟು ಸತ್ಯ ಅಡಗಿದೆ ಎನ್ನಲಾಗಿದೆ. ನನ್ನ ತಾಯಿ ಸುಚಿತ್ರ ಮತ್ತು ಕಮಲಾಕರ ಭಟ್ ಏಕಾಂತದಲ್ಲಿರುವ ದೃಶ್ಯವನ್ನು ನಾನು ನೋಡಿದ್ದೇನೆ ಎಂದು ಮಗಳು ಹೇಳಿದ್ದಾಳೆ. ತಾಯಿ ಇದ್ದಾಗ ಕಮಲಾಕರ ಭಟ್ ಒಂದು ರೀತಿಯಲ್ಲಿ ನೋಡುತ್ತಿದ್ದರೆ, ಇಲ್ಲದಾಗ ಮತ್ತೊಂದು ರೀತಿಯಲ್ಲಿ ವರ್ತಿಸುತ್ತಿದ್ದ ಎಂದು ಆಕೆ ಹೇಳಿದ್ದಾಳೆ. ಈ ಹೇಳಿಕೆ ಕಮಲಾಕರ ಭಟ್ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೇ ಎಂಬ ಅನುಮಾನಕ್ಕೆ ಕಾರಣವಾಗುತ್ತಿದೆ.
ಮಗಳು ಇಬ್ಬರ ಏಕಾಂತದ ಬಗ್ಗೆ ಮಾತನಾಡಲು ಆರಂಭಿಸಿದ ಬಳಿಕ, ತಾವು ಏಕಾಂತದಲ್ಲಿದ್ದ ವಿಡಿಯೋ ಆಕೆಯ ಬಳಿ ಇರಬಹುದೇ ಎಂಬ ಸಂಶಯ ಕಮಲಾಕರ ಭಟ್ ಮತ್ತು ಸುಚಿತ್ರಳಿಗೆ ಮೂಡಿದೆ ಎನ್ನಲಾಗುತ್ತಿದೆ. ಹೀಗಾಗಿ ಸುಚಿತ್ರ ಹಾಗೂ ಕಮಲಾಕರ ಭಟ್ ಗ್ಯಾಂಗ್ ಸಿದ್ದಾಪುರಕ್ಕೆ ಬಂದು ಮಗಳನ್ನು ಕಳುಹಿಸಿಕೊಡಬೇಕು ಎಂದು ಗಲಾಟೆ ನಡೆಸಿದ್ದಾರೆ. ಮಹೇಶ್ಗಿಂತಲೂ ಮಗಳೇ ಇವರ ಮುಖ್ಯ ಟಾರ್ಗೆಟ್ ಆಗಿದ್ದಳು ಎನ್ನುವುದು ಆಕೆಯ ಹೇಳಿಕೆಯಿಂದ ಬಯಲಾಗಿದೆ.
ಅಪ್ಪ ಮಹೇಶ್ ಮಗಳನ್ನು ಒಪ್ಪಿಸಲು ನಿರಾಕರಿಸಿದಾಗ ಜಗಳ ತೀವ್ರಗೊಂಡಿದ್ದು, ಮಹೇಶ್ಗೆ ಚಾಕು ಇರಿಸಲಾಗಿದೆ. ತಪ್ಪಿಸಲು ಬಂದ ಅಣ್ಣ ವಸಂತ್ ನಾಯ್ಕ್ನಿಗೂ ಚಾಕು ಇರಿದು ಕೊಲೆ ಮಾಡಲಾಗಿದೆ.ಸುಚಿತ್ರಳಿಗೆ ತನ್ನ ಕಾಮಕಾಂಡಕ್ಕೆ ಮಗಳೇ ಅಡ್ಡಿಯಾಗಿದ್ದಳು ಎಂಬ ಅನುಮಾನವನ್ನೂ ತಳ್ಳಿಹಾಕುವಂತಿಲ್ಲ. ಮಗಳ ಬಳಿ ತಮ್ಮ ರಾಸಲೀಲೆ ವಿಡಿಯೋ ಇರಬಹುದು ಎಂಬ ಶಂಕೆಯೂ ಸುಚಿತ್ರಳಿಗೆ ಬಂದಿರಬಹುದು. ಈ ಎಲ್ಲ ಹಿನ್ನಲೆಯಲ್ಲಿ ಸಿದ್ದಾಪುರಕ್ಕೆ ಬಂದು ಮಗಳನ್ನು ವಾಪಸ್ ಕರೆದುಕೊಂಡು ಹೋಗಲು ಸುಚಿತ್ರ ಗ್ಯಾಂಗ್ ಪ್ರಯತ್ನಿಸಿದೆ ಎನ್ನಲಾಗಿದೆ.
ರೀಲ್ಸ್ ರಾಣಿ ಸುಚಿತ್ರಳಿಗೆ ಜ್ಯೋತಿಷಿಯ ಜತೆಗೆಗಿನ ಸಂಬಂಧಕ್ಕೆ ಮಗಳೇ ಮುಳ್ಳಾಗಿದ್ದಳೇ ಎಂಬ ಸಂಶಯ ಇದೀಗ ಗಂಭೀರವಾಗಿ ಕೇಳಿಬರುತ್ತಿದೆ. ಆದರೆ ಈ ಕುರಿತು ಕುಟುಂಬಸ್ಥರು ಹಾಗೂ ಸ್ಥಳೀಯರು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.


