ಸುದ್ದಿಬಿಂದು ಬ್ಯೂರೋ ವರದಿ,
ಕುಮಟಾ:ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಾದ ಕುಮಟಾ-ಶಿರಸಿ ಹೆದ್ದಾರಿ ಕಳೆದ ಆರು ತಿಂಗಳಿಂದ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಆಗ್ರಹಿಸಿ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದಿಂದ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಅಧ್ಯಕ್ಷ ರಾಜು ಮಾಸ್ತಿಹಳ್ಳ ನೇತೃತ್ವದಲ್ಲಿ ಪ್ರತಿಭಟನಾಕಾರರು ತಹಶೀಲ್ದಾರ್ ಕಚೇರಿ ಎದುರು ಕಂಬಳಿ ಹಾಸಿ ಮಲಗಿ ಧರಣಿ ನಡೆಸಿದರು. ರಸ್ತೆಯ ಹದಗೆಟ್ಟ ಸ್ಥಿತಿಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿರುವುದು ಖಂಡಿನೀಯ, ತಹಶೀಲ್ದಾರ ಕಚೇರಿ ಎದುರಲ್ಲೇ‌‌ ಕಂಬಳಿ ಹಾಸಿ‌ ಮಲಗುವ ಮೂಲಕ ಆಕ್ರೋಶ ಹೊರಹಾಕಿದ್ದರು.

ಹೆದ್ದಾರಿ ಸ್ಥಿತಿ ಭಯಾನಕ..!
ಕುಮಟಾ-ಶಿರಸಿ ಹೆದ್ದಾರಿ ಕಾಮಗಾರಿಯಿಂದಾಗಿ ಕಳೆದ ಆರು-ಏಳು ತಿಂಗಳಿಂದ ರಸ್ತೆ ಬಂದ್ ಆಗಿದೆ. ಅಲ್ಲದೆ ರಸ್ತೆ ತುಂಬ ಹೊಂಡಗಳಿಂದ ತುಂಬಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬೈಕ್ ಸವಾರರಿಂದ ಹಿಡಿದು ಹೆಚ್ಚಿನ ವಾಹನಗಳು ಈ ರಸ್ತೆಯಲ್ಲಿ ಹಾದು ಹೋಗಲಾಗದ ಪರಿಸ್ಥಿತಿ ಉಂಟಾಗಿದೆ. ಆದರೆ ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆಯಿಲ್ಲ.

ಶಾಸಕರು ಆಗಮಿಸುವಂತೆ ಒತ್ತಾಯ, ಗುತ್ತಿಗೆದಾರರಿಂದ ದುರಸ್ತಿ ಭರವಸೆ
ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಹಾಗೂ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಆರ್‌ಎನ್ಎಸ್ (RNS) ಕಂಪನಿಯ ಪ್ರತಿನಿಧಿಗಳು, “ನಾಳೆಯಿಂದಲೇ ದುರಸ್ತಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ” ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಇದನ್ನೂ ಓದಿ:ಶೈಕ್ಷಣಿಕ ಆಡಳಿತಕ್ಕೆ ಹೊಸ ಚೇತನ – ಕುಮಟಾಕ್ಕೆ ಉದಯ್ ನಾಯ್ಕ,ಕಾರವಾರಕ್ಕೆ ಉಮೇಶ ನಾಯ್ಕ ‌ನೇಮಕ