ಸುದ್ದಿಬಿಂದು ಬ್ಯೂರೋ‌ ವರದಿ
ಶಿರಸಿ: ತಾಲೂಕಿ‌ನ ಅಜ್ಜಿಬಳ‌‌ ಶಾಲೆಯ ವಿದ್ಯಾರ್ಥಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬುಲೆರೋ ವಾಹನ ಡಿಕ್ಕಿ ಹೊಡೆದು ಪರಿಣಾಮ‌‌ ಗಾಯಗೊಂಡ‌‌‌ ವಿದ್ಯಾರ್ಥಿಗೆ. TSS ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಶಿರಸಿ ಬಿಸಲಕೊಪ್ಪ ಬಳಿಯ ಮೀಸಗುಂದಿಯಲ್ಲಿ ರಾಘವೇಂದ್ರ ನಾಯ್ಕ ಕುಟುಂಬದವರು ವಾಸವಾಗಿದ್ದರು.ರಾಘವೇಂದ್ರ ನಾಯ್ಕ ಅವರ ಪುತ್ರ ಹತ್ತು ವರ್ಷದ ತನ್ವಿಕ್ ನಾಯ್ಕ ಸಮೀಪದ ಅಜ್ಜಿಬಳ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ. ನಿನ್ನೆ ಶಾಲೆ ಮುಗಿಸಿ ಮನೆಗೆ ಮರುತ್ತಿದ್ದ ಸಮಯದಲ್ಲಿ ರಸ್ತೆ ದಾಟುತ್ತಿದ್ದಾಗ ಅಜ್ಜಿಬಳ ಗ್ಯಾರೇಜ್ ಹತ್ತಿರ ಬುಲೇರೋ ಜೀಪಿನ ಹಿಂದಿನ ಭಾಗ ತನ್ವಿಕ್ ಗುದ್ದಿದ್ದು ಪರಿಣಾಮ‌ ಆತ ಗಂಭೀರವಾಗಿ ಗಾಯಗೊಂಡಿದ್ದ ತಕ್ಷಣ‌ ಅಪಘಾತ ಪಡಿಸಿದ ವಾಹನದಲ್ಲೇ‌ ವಿದ್ಯಾರ್ಥಿಗೆ ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ತನ್ವಿಕ್ ಮೃತಪಟ್ಟಿದ್ದ.‌ ಇಂದು ಅಂತ್ಯಕ್ರಿಯೆ ನಡೆಸಲಾಗಿದೆ.

ಇದನ್ನೂ ಓದಿ:ಅನಂತಕುಮಾರ ಹೆಗಡೆ ಸೇರಿ ನಾಲ್ವರ ವಿರುದ್ಧ FIR : ಸಿಂಗಾಪುರ ಹಾರಿದ ಹೆಗಡೆ..!