ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಕಾರ ಓವರ್ ಟೇಕ್ ಮಾಡಿದ್ದಾರೆನ್ನುವ ಕಾರಣಕ್ಕೆ ಇನ್ನೊಂದು ಕಾರನಲ್ಲಿದ್ದ ಅನ್ಯಕೋವಿನ ಕುಟುಂಬದ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಅನಂತಕುಮಾರ ಹೆಗಡೆ ಸೇರಿ ನಾಲ್ವರ ವಿರುದ್ದ ದಾಬಸ್ ಪೇಟೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಉತ್ತರ ಕನ್ನಡ ಸಂಸದ ಹಾಗೂ ಮಾಜಿ ಸಚಿವ ಅನಂತಕುಮಾರ ಹೆಗಡೆ ನಿನ್ನೆ ಶಿರಸಿಯಿಂದ ತಮ್ಮ ಕಾರನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದು, ಈ ವೇಳೆ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೋಗುತ್ತಿದ್ದ ವೇಳೆ ಅನ್ಯಕೋಮಿನ ಕಾರು ಅನಂತಕುಮಾರ ಹೆಗಡೆ ಪ್ರಯಾಣಿಸುತ್ತಿದ್ದ ಕಾರನ್ನ ಓವರ್ ಟೇಕ್ ಮಾಡಿದೆ ಎನ್ನಲಾಗಿದೆ.ದಾಬಸ್ಪೇಟೆ ಬಳಿ ಹಳೆ ನಿಜಗಲ್ಲು ಸಮೀಪ ಓವರ್ ಟೇಕ್ ಮಾಡಿದ ಕಾರನ್ನ ನಿಲ್ಲಿಸಿದ ಆ ಕಾರ ಚಾಲಕ ಸೇರಿ ಕಾರನಲ್ಲದ್ದ ಕೆಲವರ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಹಲ್ಲೆಗೆ ಒಳಗಾದ ಅನ್ಯಕೋಮಿನ ಕುಟುಂಬ ವಿವಾಹ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುವ ವೇಳೆ ಈ ಗಲಾಟೆ ನಡೆದಿದೆ.
ಗಲಾಟೆ ನಡೆದಾಗ ಅನಂತಕುಮಾರ ಹೆಗಡೆ ಗನ್ ಮ್ಯಾನ್ ತನ್ನ ಬಳಿಕಯಲ್ಲಿದ್ದ ಗನ್ ತೋರಿಸಿ ಬೆದರಿಕೆ ಹಾಕಿರುವ ಬಗ್ಗೆ ಹಲ್ಲೆಗೆ ಒಳಗಾದ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆನ್ನಲಾಗಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಗನ್ ಮ್ಯಾನ್ ತನ್ನ ಸೊಂಟದಲ್ಲಿದ್ದ ಗನ್ ಹೊರ ತೆಗೆದು ಓಡಾಡಿದ ವಿಡಿಯೋ ಸಹ ವೈರಲ್ ಆಗಿದೆ. ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರ ಕಾರು ಚಾಲಕ ಹಾಗೂ ಗನ್ಮ್ಯಾನ್ ಮೇಲೆ ಎಫ್ಐಆರ್ ದಾಖಲಾಗಿದೆ. ಅನಂತ ಕುಮಾರ್ ಹೆಗಡೆ ಪುತ್ರ ಅಶುತೋಷ್, ಗನ್ಮ್ಯಾನ್ ಶ್ರೀಧರ್, ಚಾಲಕ ಮಹೇಶ್ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದ್ದು ಆ ಸಂಬಂಧ ದೂರು ದಾಖಲಾಗಿದೆ. ಇದನ್ನೂ ಓದಿ :ಪೊಲೀಸರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು
ಅನಂತಕುಮಾರ ಸಿಂಗಾಪುರಕ್ಕೆ..!
ನೆಲಮಂಗಲದಲ್ಲಿ ಸಂಸದರ ಕಾರನ್ನ ಓವರ್ ಟೇಕ್ ಮಾಡಿದ್ದಾರೆನ್ನುವ ಪ್ರಕರಣಕ್ಕೆ ಸಂಬಂಧಿಸಿ ಓವರ್ ಟೇಕ್ ಮಾಡಿದ ಅನ್ಯಕೋಮಿನವರ ಮೇಲೆ ಅನಂತಕುಮಾರ ಹೆಗಡೆ ಕಾರ ಚಾಲಕ, ಗನ್ ಮ್ಯಾನ್ ಹಾಗೂ ಅನಂತಕುಮಾರ ಹೆಗಡೆ ಪುತ್ರ ಅಶುತೋಷ್ ಒಟ್ಟು ನಾಲ್ವರ ಮೇಲೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನೂ ಈ ಘಟನೆಯಾದ ತಡ ರಾತ್ರಿ ಮಾಜಿ ಸಂಸದ ಸಿಂಗಾಪುರಕ್ಕೆ ಪ್ರಯಾಣಿಸಿದ್ದಾರೆನ್ನಲಾಗಿದೆ. ಅವರು ಸಿಂಗಾಪುರ ಹೋಗುವುದು ಮೊದಲೆ ನಿಗದಿಯಾಗಿತ್ತು. ಎನ್ನಲಾಗಿದೆ. ಹೀಗಾಗಿಯೇ ಅವರು ಶಿರಸಿಯಿಂದ ಬೆಂಗಳೂರಿಗೆ ತೆರಳಿ ಅಲ್ಲಿಂದ ಸಿಂಗಾಪುರ ಹೋಗಲು ತಮ್ಮ ಕಾರನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ :ಇಂದು ಅಂಗನವಾಡಿ, ಶಾಲಾ- ಕಾಲೇಜುಗಳಿಗೆ ರಜೆ