ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಓವರ್ಟೇಕ್ ಮಾಡುವ ವಿಚಾರವಾಗಿ ಜಗಳ ಸಂಭವಿಸಿ,ಉತ್ತರ ಕನ್ನಡದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಬೆಂಬಲಿಗರು ಅನ್ಯಕೋಮಿನ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆನ್ನುವ ಆರೋಪಗಳು ಕೇಳಿಬಂದಿವೆ.
ತಾಲೂಕಿನ ದಾಬಸ್ಪೇಟೆ ಬಳಿ ಹಳೆ ನಿಜಗಲ್ಲು ಬಳಿ ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಅನಂತ ಕುಮಾರ್ ಹೆಗಡೆ ಕಾರನ್ನು ಮುಸ್ಲಿಂ ಸಮುದಾಯದವರು ಪ್ರಯಾಣಿಸುತ್ತಿದ್ದ ಕಾರೊಂದು ಅನಂತಕುಮಾರ ಹೆಗಡೆ ಅವರು ಪ್ರಯಾಣಿಸುತ್ತಿದ್ದ ಕಾರನ್ನ ಓವರ್ ಟೇಕ್ ಮಾಡಿದ್ದಾರೆನ್ನಲಾಗಿದೆ, ಇದಕ್ಕೆ ಸಿಟ್ಟಾದ ಅನಂತಕುಮಾರ ಹೆಗಡೆ ಕಾರನಲ್ಲಿದ್ದ ಬೆಂಬಲಿಗರು ಹಾಗೂ ಗನ್ ಮ್ಯಾನ್ ಕೆಳಗಿಳಿದು ಅನ್ಯಕೋಮಿನ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆನ್ನಾಗಿದ್ದು, ಓರ್ವ ಹಲ್ಲು ಹೊಡೆತರ ರಭಸಕ್ಕೆ ಕಿತ್ತು ಬಿದ್ದಿದೆ ಎನ್ನಲಾಗಿದೆ.
ಆ ಕಾರಿನ ಚಾಲಕ ಹಾಗೂ ಕಾರಿನಲ್ಲಿ ಇದ್ದವರ ಮೇಲೆ ಅನಂತ ಕುಮಾರ್ ಹೆಗಡೆ ಗನ್ಮ್ಯಾನ್ ಶ್ರೀಧರ್ ಹಾಗೂ ಡ್ರೈವರ್ ಮಹೇಶ್ ಹಲ್ಲೆ ನಡೆಸಿದ್ದಾರೆ ಎನ್ನುವ ವಿಡಿಯೋವೊಂದು ವೈರಲ್ ಆಗಿದೆ. ಕಾರಿನಲ್ಲಿ ಇದ್ದ ಮುಸ್ಲಿಂ ಸಮುದಾಯದವರು ದಾಬಸ್ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ವೇಳೆ, ಅನಂತ ಕುಮಾರ್ ಮತ್ತು ಅವರ ಬೆಂಬಲಿಗರನ್ನು ನೆಲಮಂಗಲ ನಗರದ ಬಳಿಯ ಡಿವೈಎಸ್ಪಿ ಕಚೇರಿಗೆ ಕರೆತರಲಾಗಿದೆ.
ಇದನ್ನೂ ಓದಿ :-ಪೊಲೀಸರ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು : ಎಸ್ಪಿ ಎಂ ನಾರಾಯಣ