ಸುದ್ದಿಬಿಂದು ಬ್ಯೂರೋ ವರದಿ (Suddibindu Digital News)
ಹಾಸನ: ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮಘಟ್ಟ ಭಾಗದಲ್ಲಿ ವ್ಯಾಪಕ‌ ಮಳೆ ಸುರಿಯುತ್ತಿದ್ದು ಭಾರೀ ಮಳೆಯಿಂದಾಗಿ ಸಕಲೇಪುರ ತಾಲೂಕಿನ ಯಡೆಕುಮಾರಿ ಬಳಿ ರೈಲ್ವೆ ಹಳಿಯ ಮೇಲೆ ಗುಡ್ಡು ಕುಸಿತ ಉಂಟಾಗಿ ಬೆಂಗಳೂರು-ಮುರುಡೇಶ್ವರ ರೈಲು ಸಂಚಾರ ಸ್ಥಗಿತವಾಗಿದೆ.

ಅರೆಬೆಟ್ಟ ಮತ್ತು ಯಡೆಕುಮಾರಿ ಮಧ್ಯ ಭಾಗದಲ್ಲಿ ಗುಡ್ಡಕುಸಿತ ಉಂಟಾಗಿದೆ.‌ ಕಿಲೋಮೀಟರ್ 74 & 75 ರ ಬಳಿ ರೈಲ್ವೆ ಹಳಿ ಮೇಲೆ ಭಾರೀ ಪ್ರಮಾಣದ ಕಲ್ಲು ಮಣ್ಣು ಬಿದ್ದಿದ್ದು ಭಾರೀ ದೊಡ್ಡ ಅನಾಹುತವೊಂದು ತಪ್ಪಿದೆ.ಗುಡ್ಡ ಕುಸಿಯುವ ಅನತಿ ದೂರದಲ್ಲಿ ರೈಲ್ವೆ ಬರುತ್ತಿದ್ದು,ಈ ವೇಳೆ ರೈಲ್ವೆ ಫೈಲೇಟ್ ಸಮಯ ಪ್ರಜ್ಞೆನೆಯಿಂದಾಗಿ ಸ್ವಲ್ಪ ದೂರದಲ್ಲೆ ರೈಲ್ವೆ ನಿಲ್ಲಿಸಲಾಗಿದೆ. ಘಟನೆಯಿಂದಾಗಿ ಬೆಂಗಳೂರು-ಕಣ್ಣೂರು ಘಾಟ್‌, ಬೆಂಗಳೂರು-ಮುರುಡೇಶ್ವರ ರೈಲುಗಳ ಸಂಚಾರ ಸ್ಥಗಿತ ಮಾಡಲಾಗಿದೆ.ಸ್ಥಳಕ್ಕೆ ಬಂದ ರೈಲ್ವೆ ಸಿಬ್ಬಂದಿಗಳು ಗುಡ್ಡ ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದಾರೆ.

ಇದನ್ನೂ ಓದಿ