ಸುದ್ದಿಬಿಂದು ಬ್ಯೂರೋ‌ ವರದಿ
ಹಾಸನ : ಕೊಡಿ ಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ (ಕೊಡಿಶ್ರೀ) ಅವರು ರಾಜಕೀಯ ಹಾಗೂ ನೈಸರ್ಗಿಕ ವಿಪತ್ತುಗಳ ಭಯಾನಕ ಭವಿಷ್ಯವಾಣಿಗಳಿಗಾಗಿ ಪ್ರಸಿದ್ಧರಾಗಿದ್ದು, ಇದೀಗ ಮತ್ತೊಂದು ಸ್ಪೋಟಕ ಭವಿಷ್ಯವಾಣಿಯನ್ನ ನುಡಿದ್ದಾರೆ. ದೇಶ ಹಾಗೂ ರಾಜ್ಯದ ಮೇಲೆ ಭಾರೀ ಅಪಾಯ ಎದುರಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮಾರ್ಮಿಕವಾಗಿ ಅನೇಕ‌ ವಿಚಾರವನ್ನ ಶ್ರೀಗಳು ನುಡಿದಿದ್ದು
, ರಾಜ್ಯಕ್ಕೆ ಹಾಗೂ ದೇಶಕ್ಕೆ ಅಪಾಯ ಕಾದಿದೆ ಎನ್ನುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಸೇರಿದಂತೆ ಹಲವಾರು ವಿಷಯಗಳ ಕುರಿತು ಕೊಡಿಶ್ರೀ ಅವರು ಆತಂಕಕಾರಿ ಭವಿಷ್ಯವಾಣಿಗಳನ್ನು ಹಿಂದೆ ನುಡಿದಿದ್ದರು, ಈಗ ಅವರು ಹೊಸದಾಗಿ ಕೆಲವು ತೀಕ್ಷ್ಣ ಎಚ್ಚರಿಕೆಗಳನ್ನು ನೀಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು,ಜನವರಿಯೊಳಗೆ‌‌‌ ರಾಜ್ಯ ಮತ್ತು ದೇಶಕ್ಕೆ ಭಾರೀ ಅಪಾಯ ಎದುರಾಗಲಿದೆ. ಅಕಾಲಿಕ ದುಃಖ ಎದುರಾಗಲಿದೆ. ಈಗಾಗಲೇ ಮೇಘ ಸ್ಪೋಟದಿಂದಾಗಿ ಭಾರಿ ಹಾನಿ ಹಾಗೂ ಪ್ರವಾಹಗಳಿಂದ ಅಪಾಯ ಎದುರಾಗಲಿದೆ ಎಂದು ನಾನು ಹೇಳಿದ್ದೆ. ಇತ್ತೀಚೆಗೆ ವಿಮಾನ ಅಪಘಾತದಂತಹ ವಿಪತ್ತುಗಳು ಸಂಭವಿಸಿವೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಭಾರೀ ಮೇಘ ಸ್ಪೋಟ ಸಂಭವಿಸುತ್ತದೆ. ನಿರೀಕ್ಷೆಗೂ ಮೀರಿದ ದುಃಖವೊಂದು ಬರುವುವುದಾಗಿ‌ ಭವಿಷ್ಯವಾಣಿ ಇದೆ,” ಎಂದು ಹೇಳಿದರು.

“ಜನರು ನಡೆದಾಡುವಾಗಲೇ ಸಾವನ್ನಪ್ಪುತ್ತಾರೆಂದು ಹಿಂದೆಯೇ ನಾನು ಹೇಳಿದ್ದೆ. ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಇನ್ನೂ ಹೆಚ್ಚಾಗುತ್ತದೆ. ದೇಶ- ರಾಜ್ಯ ಸಂಕಟದಲ್ಲಿವೆ. ಈ ರಾಷ್ಟ್ರದಲ್ಲಿ ದ್ವೇಷ ಮತ್ತು ಅಸೂಯೆಯಿಂದಾಗಿ ಒಬ್ಬರೋ ಇಬ್ಬರೋ ಬಲಿಯಾಗುತ್ತಾರೆ. ಅಕಾಲಿಕ ಮಳೆಯ ಕಾರಣದಿಂದ ಕಾಲಕ್ಕೆ ಮಳೆ ಇಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚೆಗೆ ಜಾಗತಿಕ ಗಮನ ಸೆಳೆದಿರುವ ಇರಾನ್-ಇಸ್ರೇಲ್ ಯುದ್ಧವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, “ಈಗ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಕಷ್ಟವಾಗುತ್ತಿದೆ,” ಎಂದರು.

“ಅರಸನಾಲಯಕ್ಕೆ ಕಪ್ಪು ಮೋಡ ಕವಿದಿತ್ತು. ಇದು ಕೇಂದ್ರಕ್ಕೂ ರಾಜ್ಯಕ್ಕೂ ಅನ್ವಯಿಸುತ್ತದೆ. ಹಿಂದೆ ನಾನು ಮೂವರು ಪ್ರಧಾನ ಮಂತ್ರಿಗಳು ಹತ್ಯೆಯಾಗಲಿದ್ದಾರೆ ಎಂದು ಹೇಳಿದ್ದೆ, ಅದು ಸಂಭವಿಸುತ್ತದೆ. ನಮ್ಮ ದೇಶವು ಅಕಾಲಿಕ ದುಃಖವನ್ನು ಎದುರಿಸಬೇಕಾಗುತ್ತದೆ. ಜನರು ಮನೆಗೆ ಬರುತ್ತಾರೋ ಇಲ್ಲವೋ ಎಂಬುದೂ ಗೊತ್ತಾಗದ ಸ್ಥಿತಿ ಉಂಟಾಗುತ್ತದೆ,” ಎಂದರು.

ಇದನ್ನೂ ಓದಿ