ಸುದ್ದಿಬಿಂದು ಬ್ಯೂರೋ ವರದಿ
ಜೊಯೀಡಾ : ಜಮೀನಲ್ಲಿ ಬೇಲಿ ನಿರ್ಮಿಸುತ್ತಿದ್ದ ರೈತನೋರ್ವನ ಮೇಲೆ ಕರಡಿ ದಾಳಿ ನಡೆಸಿದ್ದು,ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡ ಘಟನೆ ಹುಡಸಾ ಗ್ರಾಮದಲ್ಲಿ ನಡೆದಿದೆ.
ತುಕಾರಾಮ ದೇಸಾಯಿ (45) ಗಾಯಗೊಂಡ ರೈತನಾಗಿದ್ದಾನೆ. ಇವರು ತಮ್ಮ ಜಮೀನಿಗೆ ಬೇಲಿ ನಿರ್ಮಿಸುತ್ತಿದ್ದರು ಈ ವೇಳೆ ಕರಡಿ ದಾಳಿ ನಡೆಸಿದ್ದು, ಇದರಿಂದಾಗಿ ರೈತನ ಮುಖ,ತಲೆ,ಕೈ ಕಾಲು,ಎದೆ ಭಾಗದಲ್ಲಿ ಗಂಭೀರವಾಗಿ ಗಾಯವಾಗಿದೆ.

ಗಾಯಗೊಂಡ ರೈತನಿಗೆ ಜೊಯಿಡಾ ತಾಲೂಕಾ ಆಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗ ಗಾಯವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ