ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕಳೆದ ಎರಡು ದಿನಗಳ ಹಿಂದೆ ಸುರಿದ ಧಾರಾಕರ ಮಳೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಸಾಕಷ್ಟು ಅವಾಂತರ ಸೃಷ್ಠಿ ಮಾಡಿತ್ತು.ಇನ್ನೂ ಸಹ ರೆಡ್ ಅಲರ್ಟ್ ಮುಂದುವರೆದಿದೆ.ಆದರೂ ಆಂಗನವಾಡಿ ಹಾಗೂ ಪ್ರಾಥಮಿಕ,ಪ್ರೌಢ ಶಾಲೆಗಳು ಎಂದಿನಂತೆ ಇಂದು ಆರಂಭವಾಗಲಿದೆ..
ಬುಧುವಾರ ಹಾಗೂ ಗುರುವಾರ ಸುರಿದ ಮಳೆಗೆ ಕಾರವಾರದಿಂದ ಭಟ್ಕಳದವರೆಗಿನ ಜನ ಬೆಚ್ಚಿಬಿಳುವಂತೆ ಮಾಡಿ ಹೋಗಿದ್ದ ಮಳೆ ನಿನ್ನೆ ಶುಕ್ರವಾರ ಕೊಂಚ ಬಿಡುವು ಕೊಟ್ಟಿತ್ತು. ಆದರೆ ನಿನ್ನೆ ರಾತ್ರಿಯಿಂದ ಮತ್ತೆ ಕರಾವಳಿ ಜಿಲ್ಲೆಯ ಬಹುತೇಕ ತಾಲೂಕಿನಲ್ಲಿ ರಾತ್ರಿಯಿಂದಲ್ಲೆ ಗಾಳಿ ಸಹಿತ ಮಳೆ ಸುರಿಯಿತ್ತಿದೆ. ಭಾರೀ ಗಾಳಿ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರಾತ್ರಿಯಿಂದ ಇದುವರಗೆ ವಿದ್ಯುತ್ ನಿಂತು ಹೋಗಿದೆ..
ಬೆಳಿಗ್ಗೆಯಿಂದಲ್ಲೂ ಮಳೆ ಮುಂದುವರೆದಿದೆ..
ಗಾಳಿ ಸಹಿತ ಮಳೆಯಾಗತ್ತಾ ಇರುವ ಕಾರಣ ಮರಗಳ ಕೊಂಬೆಗಳು ಮುರಿದು ಅಲ್ಲಲ್ಲಿ ವಿದ್ಯುತ್ ತಂತಿ ಸೇರಿದಂತೆ ಮನೆಗಳ ಮೇಲೆ ಬಿದ್ದಿರುವ ಬಗ್ಗೆ ವರದಿಯಾಗಿದೆ..ಇದೇ ರೀತಿ ಮಳೆ ಮುಂದುವರೆದಲ್ಲಿ ಹೆದ್ದಾರಿಯ ಎಲ್ಲೆಲ್ಲಿ ಗುಡ್ಡಕುಸಿಯಲಿದೆ ಎನ್ನುವುದನ್ನ ಹೇಳಲು ಅಸಾಧ್ಯವಾಗಿದೆ.
ಇದನ್ನೂ ಓದಿ
- ಹೊನ್ನಾವರದಲ್ಲಿ ಆರ್ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಓವರ್ಲೋಡ್ ಸಾಗಿಸುತ್ತಿದ್ದ 17ಲಾರಿ ವಶಕ್ಕೆ
- ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್ ? ಡಿಕೆಶಿ ಒಲವು; ಕಾಂಗ್ರೆಸ್ನಲ್ಲಿ ಶುರುವಾಯ್ತು ಹೊಸ ಲೆಕ್ಕಾಚಾರ..!
- ಮೀನುಗಾರಿಕಾ ಬೋಟ್ ಮುಳುಗಡೆ : ಏಳು ಮೀನುಗಾರರ ರಕ್ಷಣೆ
- ಡಿಕೆಶಿ ಜತೆಗೆ 8 ಸಚಿವರ ಪ್ರಮಾಣವಚನ ಸ್ವೀಕಾರ? ಮೊದಲ ಕಂತಲ್ಲೇ ಮಂಕಾಳ್ ವೈದ್ಯ ಸಚಿವರಾಗಲಿದ್ದಾರಾ.!

