ಸುದ್ದಿಬಿಂದು ಬ್ಯೂರೋ‌ ವರದಿ
ಕುಮಟಾ: ತಾಲೂಕಿನಾದ್ಯಂತ ವ್ಯಾಪಕವಾಗಿ‌‌ ಮಳೆ‌ಸುರಿಯುತ್ತಿರುವ ಕಾರಣ ಕುಮಟಾ-ಶಿರಸಿಯನ್ನ ಸಂಪರ್ಕಕಲ್ಪಿಸುವ ಹೆದ್ದಾರಿ ದೇವಿಮನೆ ಘಟ್ಟದಲ್ಲಿ‌‌ ಇದೀಗ ಅಪಾರ ಪ್ರಮಾಣದಲ್ಲಿ ಗುಡ್ಡಕುಸಿತ ಉಂಟಾಗಿ ವಾಹನ‌ ಸಂಚಾರ್ ಸ್ಥಗಿತ ಮಾಡಲಾಗಿದೆ.

ನಿನ್ನೆಯಿಂದ‌ ದೇವಿಮನೆ ಘಟ್ಟದ ಗುಡ್ಡಕುಸಿತ ಉಂಟಾಗುತ್ತಿದೆ.ನಿನ್ನೆ ಸಂಜೆ ವೇಳೆಯಲ್ಲಿ‌‌ ಇದೆ‌ ಭಾಗದ‌ ಕೆಲವು ಕಡೆಯಲ್ಲಿ ಗುಡ್ಡಕುಸಿತ ಉಂಟಾಗಿದ್ದು ಬೆಳಿಗ್ಗೆ ಆಗುವಷ್ಟರಲ್ಲಿ ತೆರವು ಮಾಡಲಾಗಿತ್ತು.ಆದರೆ ಇಂದು ಬೆಳಿಗ್ಗೆ ಸಹ ದೇವಿಮನೆ ಘಟ್ಟದಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಗುಡ್ಡಕುಸಿತ ಉಂಟಾಗಿದ್ದು,ವಾಹನ ಸಂಚಾರವನ್ನ ಬಂದ್ ಮಾಡಲಾಗಿದೆ. ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಹೆಸರಲ್ಲಿ ಭಾರೀ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ಮಾಡಲಾಗಿತ್ತು.‌‌ ಇನ್ನೂ ಅವಧಿ ಪೂರ್ವದಲ್ಲಿ ಸುರಿದ ಮಳೆಯಿಂದಾಗಿ ಬೆಣ್ಣೆಹಳ್ಳ‌ ಬಳಿ ತಾತ್ಕಾಲಿವಾಗಿ ನಿರ್ಮಿಸಿದ ರಸ್ತೆ‌ ಕೊಚ್ಚಿಹೋಗಿ‌ ಕೆಲ ದಿನಗಳ ಕಾಲ‌‌ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸಲಾಗಿತ್ತು.

ದುರಸ್ಥಿ ನಂತರಲ್ಲಿ ವಾಹನ ಓಡಾಟಕ್ಕೆ ಅವಕಾಶ ನೀಡಿದ ಕೆಲ‌ ದಿನದಲ್ಲೇ‌ ಮತ್ತೆ ಇದೀಗ ಸುರಿಯುತ್ತಿರುವ ಮಳೆಗೆ ಗುಡ್ಡ ಕುಸಿತ ಉಂಟಾಗಿದೆ. ಇದರಿಂದಾಗಿ ಮತ್ತೆ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.ಮಳೆ ನಿರಂತರವಾಗಿ ಮುಂದುವರೆದಲ್ಲಿ ಕುಮಟಾ ಶಿರಸಿ ರಸ್ತೆಯ ದೇವಿಮನೆ ಘಟ್ಟ ಸೇರಿದಂತೆ ಇನ್ನೂ ಹಲವು ಕಡೆಯಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಿದೆ.

ಸುದ್ದಿಬಿಂದು ಓದುಗರಲ್ಲಿ ವಿನಂತಿ ಇದುವರೆಗೆ ತಾವೇಲ್ಲರೂ ಸುದ್ದಿಬಿಂದು ವೆಬ್ ನ್ಯೂಸ್‌ನ್ನು ಪ್ರೀತಿಯಿಂದ ಸ್ವೀಕರಿಸಿದ್ದಿರಿ. ಸದ್ಯ Broadcast‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಕಾರಣ ತಾವೇಲ್ಲರೂ ಈ ಲಿಂಕ್ ಮೂಲಕ ಗ್ರೂಪ್ ಸೇರಿಕೊಳ್ಳುವ ಮೂಲಕ ಹಿಂದಿನಂತೆ ಸುದ್ದಿ ಓದು ಬಹುದಾಗಿದೆ  ವಾಟ್ಸಾಪ್ ಚಾನಲ್ ಸೇರಿಕೊಳ್ಳಬಹುದು..https://whatsapp.com/channel/0029VaAvVKA47Xe7I9bdgG31

ಇದನ್ನೂ ಓದಿ