ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರೂ : ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ಯಾವುದೇ ವಿಚಾರ ಸದ್ಯ ನಮ್ಮ ಮುಂದೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದ್ದಾರೆ. ಇವರ ಹೇಳಿಕೆಯಿಂದಾಗಿ ಸಚಿವ ಸಂಪುಟ ಬದಲಾಬಣೆ ಸದ್ಯ ತೆರೆ ಬಿದ್ದಿರುವಂತಾಗಿದೆ.
ಕರ್ನಾಟಕ ಸರ್ಕಾರವನ್ನು ಜಾತಿ ಜನಗಣತಿಯ ಪುನಃ ಸಮೀಕ್ಷೆ ನಡೆಸುವಂತೆ ಕೇಳಲಾಗಿದೆ. ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಾತಿ ಸಮೀಕ್ಷೆ ನಡೆಸಿದ್ದು 10 ವರ್ಷಗಳ ಹಿಂದೆ. ಆಗಿನಿಂದ ಈಗ ತನಕ ಹಲವಾರು ಬದಲಾವಣೆಗಳು ನಡೆದಿವೆ. ಅನೇಕ ಸಮುದಾಯಗಳು ಇತ್ತೀಚೆಗೆ ಓಬಿಸಿ ಪಟ್ಟಿಗೆ ಸೇರಿವೆ. ಅಲ್ಲದೆ, ಸಮಾಜದಲ್ಲಿ ಹಲವು ಬದಲಾವಣೆಗಳು ಸಂಭವಿಸಿದ್ದರಿಂದ, ಎಲ್ಲರನ್ನೂ ಒಳಗೊಂಡಂತೆ ಸಮಗ್ರ ಜಾತಿ ಸಮೀಕ್ಷೆ ನಡೆಯಬೇಕು ಎಂಬುದು ನಮ್ಮ ಉದ್ದೇಶ,” ಎಂದು ಹೇಳಿದರು.ಖರ್ಗೆ ಹೇಳಿಕೆ ಬಳಿಕ ಇದೀಗ ಸಚಿವ ಸಂಪುಟ ವಿಸ್ತರಣೆಗೆ ಈ ವರ್ಷದ ಕೊನೆ ತನಕ ಬ್ರೇಕ್ ಬಿದ್ದಿದೆ ಎನ್ನಲಾಗಿದ್ದು, ಹಾಗೇನಾದರೂ ಬದಲಾವಣೆ ಆದರೆ ನವೆಂಬರ್ ನಂತರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ
ಇನ್ನೂ ಕೆಪಿಸಿಸಿ ಅಧ್ಯಕ್ಷರನ್ನ ಕೂಡ ಬದಲಾವಣೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಸಹ ಸಾಕಷ್ಟು ಚರ್ಚೆಗಳು ಉಂಟಾಗಿತ್ತು. ಆದರೆ ಡಿಕೆ ಶಿವಕುಮಾರ ಅವರು ಸಮರ್ಥವಾಗಿ ಅಧ್ಯಕ್ಷ ಸ್ಥಾನವನ್ನ ನಿಭಾಯಿಸುತ್ತಿದ್ದು, ಪಕ್ಷದಲ್ಲಿ ಯಾವುದೇ ಗೊಂದಲದ ವಾತಾವರಣ ಇಲ್ಲ. ಹೀಗಾಗಿ ಅವರನ್ನ ಬದಲಾಬಣೆ ಮಾಡುವ ಯಾವುದೇ ಸನ್ನಿವೇಶ ಕಾಂಗ್ರೆಸ್ ಹೈಕಮಾಂಡ ಎದುರು ಇಲ್ಲ ಎನ್ನಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ರಾಜ್ಯದ್ಯಂತ ತಲುಪುತದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ರಾಜಕೀಯ ಅಪರಾಧ, ಮಳೆ ಹಾನಿ, ಯಾವುದೇ ಕ್ರೈಂ ಸೇರಿ ಸುದ್ದಿಯಾಗುವ ವಿಚಾರಗಳು ಯಾವುದೇ ಇದ್ದರೂ 9916127361 ಈ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸಲಾಗುವುದು.
ಇದನ್ನೂ ಓದಿ