ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಮೀನಿನ ಬಲೆ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನ ನುಂಗಿ ಸಾವನ್ನಪ್ಪಿರುವ ಹಂಪ್ ಬ್ಯಾಕ್ ಪ್ರಬೇಧದ ಡಾಲ್ಫಿನ್ ಕೊಳೆತಸ್ಥಿತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ್ ಕಡಲತೀರದಲ್ಲಿ ಪತ್ತೆಯಾಗಿದೆ..
ಕಳೆದ ಎರಡು ಮೂರು ದಿನಗಳ ಹಿಂದೆ ಡಾಲ್ಫಿನ್ ಕಡಲಿನಲ್ಲಿ ಮೃತಪಟ್ಟಿದೆ. ಇನ್ನು ಇಂದು ಕಡಲ ತೀರಕ್ಕೆ ಮೃತದೇಹ ಬಂದಿದ್ದು ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಡಲ ತೀರಕ್ಕೆ ಬಂದು ಡಾಲ್ಫಿನ್ ದೇಹವನ್ನ ಪರಿಶೀಲಿಸಿದಾಗ ಡಾಲ್ಫಿನ್ ಹೊಟ್ಟೆಯೊಳಗೆ ಪ್ಲಾಸ್ಟಿಕ್ ನಿಂದ ಮಾಡಿರುವ ಬಲೆಯ ತುಂಡುಗಳು ಪತ್ತೆಯಾಗಿದೆ.
ಇನ್ನು ಪ್ಲಾಸ್ಟಿಕ್ ಬಳಕೆ ನಂತರ ಪ್ರಕೃತಿಯಲ್ಲಿ ಎಸೆಯುತ್ತಿದ್ದು ಈ ಪ್ಲಾಸ್ಟಿಕ್ ಕಡಲಿಗೆ ಸೇರಿ ಅದನ್ನ ಜಲಚರಗಳು ತಿನ್ನುತ್ತಿದೆ. ಇನ್ನು ಪ್ಲಾಸ್ಟಿಕ್ ತಿಂದ ಜಲಚರವನ್ನ ಆಹಾರವಾಗಿ ಮನುಷ್ಯ ತಿಂದರೇ ಆತನೂ ಸಹ ಪ್ಲಾಸ್ಟಿಕ್ ಸೇವನೆ ಪರೋಕ್ಷವಾಗಿ ಮಾಡಿದಂತಾಗುತ್ತಿದ್ದು ಇದರಿಂದ ಕಾಯಿಲೆಗಳು ಸಹ ಬರುತ್ತಿದೆ. ಇನ್ನು ಕಾರವಾರದಲ್ಲಿ ಸಿಕ್ಕ ಡಾಲ್ಫಿನ್ ಹಂಪ್ ಬ್ಯಾಕ್ ತಳಿಯಾಗಿದ್ದು ಪ್ರತಿ ವರ್ಷ ಡಾಲ್ಫಿನ್ ಕರಾವಳಿಯಲ್ಲಿ ಸಾಕಷ್ಟು ಕಡೆ ಮೃತದೇಹಗಳು ಸಿಗುತ್ತಿದೆ. ಡಾಲ್ಫಿನ್ ಗಳ ಸಾವಿಗೆ ಕೆಲವು ಬೋಟ್ ತಗುಲಿ ಅಥವಾ ಕಲ್ಲು ಬಂಡೆಗಳು ತಗುಲಿ ಸಾವನ್ನಪ್ಪುತ್ತಿದ್ದರೆ ಇತ್ತಿಚೆಗೆ ಹಲವು ಡಾಲ್ಫಿನ್ ಗಳ ದೇಹದಲ್ಲಿ ಪ್ಲಾಸ್ಟಿಕ್ ಪತ್ತೆಯಾಗುತ್ತಿದ್ದು ಪ್ಪಾಸ್ಟಿಕ್ ಸೇವೆನೆಯಿಂದ ಮೃತಪಡುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಡಲಿಗೆ ಪ್ಲಾಸ್ಟಿಕ್ ಸೇರದಂತೆ ಅನೇಕ ಯೋಜನೆ ತರುತ್ತಿದ್ದು ಪ್ರತಿವರ್ಷವೂ ಕಡಲ ತೀರ ದಿನಾಚರಣೆ ವೇಳೆ ಪ್ಲಾಸ್ಟಿಕ್ ಕಡಲಿಗೆ ಸೇರದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಆದರೆ ಪ್ಲಾಸ್ಟಿಕ್ ಕಡಲಿಗೆ ಸೇರುವುದು ಮಾತ್ರ ನಿಂತಿಲ್ಲ. ಸದ್ಯ ಪ್ಲಾಸ್ಟಿಕ್ ಸೇವನೆಗಳಿಂದ ಜಲಚರಗಳು ಸಾವನ್ನಪ್ಪುತ್ತಿದ್ದು ಜನರು ತಮ್ಮ ಆರೋಗ್ಯದ ಬಗ್ಗೆ ಜಾಗೃತಿ ಇಟ್ಟುಕೊಂಡು ಪ್ಲಾಸ್ಟಿಕ್ ಬಳಕೆಯನ್ನ ಕಡಿಮೆಮಾಡಿದರೆ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ರಾಜ್ಯದ್ಯಂತ ತಲುಪುತದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಅಪಘಾತ, ಕಳ್ಳತನ, ಮಳೆ ಹಾನಿ, ಯಾವುದೇ ಕ್ರೈಂ ಸೇರಿ ಸುದ್ದಿಯಾಗುವ ವಿಚಾರಗಳನ್ನು 9916127361 ಈ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸಲಾಗುವುದು..
ಇದನ್ನೂ ಓದಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ


