ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಇದೀಗ ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನ ವರ್ಗಾವಣೆ ಮಾಡಿದ್ದು, ಅದರ ಬೆನ್ನಲೆ ಸಿಎಂ ರಾಜಕೀಯ ಕಾರ್ಯದರ್ಶಿ Mlc ಗೋವಿಂದರಾಜು ಅವರಿಗೂ ಸಹ ಕೋಕ್ ನೀಡಲಾಗಿದೆ.

ಕಾಲ್ತುಳಿತ ಪ್ರಕರಣದ ಬಳಿಕ ನಿನ್ನೆ ಐವರು ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಲಾಗಿತ್ತು. ಈ ಬಗ್ಗೆ ಪ್ರತಿಪಕ್ಷಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿ ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿರೋದು ಸರಿಯಾದ ಕ್ರಮವಲ್ಲ‌. ಇದರಲ್ಲಿ ಗುಪ್ತಚರ ಇಲಾಖೆ ಕೂಡ ವಿಫಲವಾಗಿದೆ. ಹೀಗಾಗಿ ಗುಪ್ತಚರ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು, ತಮ್ಮ ಬುಡಕ್ಕೆ ಕುತ್ತು ಬರಲಿದೆ ಎನ್ನುವ ಕಾರಣಕ್ಕೆ ಸರಕಾರ ಗುಪ್ತಚರ ಇಲಾಖೆ ವಿರುದ್ಧ ಸರಕಾರ ಕ್ರಮ ಜರುಗಿಸಲು ಹಿಂದೇಟ್ಟು ಹಾಕುತ್ತಿದೆ. ಇದಕ್ಕೆ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಕಾಂಗ್ರೇಸ್ ಶಾಸಕರಾಗಿದ್ದರು ಹೀಗಾಗಿ ಹೇಮಂತ್ ನಿಂಬಾಳ್ಕರ್ ಕಾಂಗ್ರೇಸ್ ಪರವಾಗಿ ಇದ್ದವರು ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಇದರ ಬೆನ್ನಲ್ಲೆ ಸರಕಾರ ತಕ್ಷಣ ಜಾರಿಗೆ ಬರುವಂತೆ ಗುಪ್ತಚರ ಇಲಾಖೆಯ. Adgp ಹೇಮಂತ್ ನಿಂಬಾಳ್ಕರ್ ಅವರ‌ನ್ನ ವರ್ಗಾವಣೆ ಮಾಡಿ ಆದೇಶಿಸಿದೆ ಎನ್ನಲಾಗಿದೆ. ಸ್ಥಳ ತೋರಿಸದೆ ಹೇಮಂತ್ ನಿಂಬಾಳ್ಕರ್ ಅವರನ್ನ ವರ್ಗಾವಣೆ ಮಾಡಲಾಗಿದೆ. ಇವರ ವರ್ಗಾವಣೆ‌ ಬೆನ್ನಲ್ಲೆ ಅವರ ಸ್ಥಳಕ್ಕೆ ಎಸ್ ರವಿ ಅವರನ್ನ ನೇಮಕ‌‌ ಮಾಡಿ ಆದೇಶಿಸಲಾಗಿದೆ. ಇನ್ನೂ ಸಿಎಂ ರಾಜಕೀಯ ಕಾರ್ಯದರ್ಶಿ Mlc ಗೋವಿಂದರಾಜು ಅವರಿಗೆ ಕೊಕ್‌ ನೀಡಲಾಗಿದ್ದು, ಇವರೆ RCB ವಿಜಯೋತ್ಸವಕ್ಕೆ‌ ಅನುಮತಿ‌ ನೀಡುವಂತೆ Mlcಗೋವಿಂದರಾಜು ಅವರು ಒತ್ತಡ ಹಾಕಿದ್ದರು ಎನ್ನಲಾಗಿದ್ದು, ಈ ಕಾರಣಕ್ಕೆ ಸಿಎಂ‌ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದರಾಜು ಅವರಿಗೆ ಕೊಕ್ ನೀಡಲಾಗಿದೆ.ಇನ್ನೂ ಹಲವು ಅಧಿಕಾರಿಗಳ ತಲೆದಂಡಕ್ಕೆ ಸರಕಾರ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ