ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ ; ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದಿಂದ ಜೂ. 10ರಂದು ಯಲ್ಲಾಪುರದ ನಿಸರ್ಗ ಮನೆಯಲ್ಲಿ ಪಂಚಾಯತ್ ರಾಜ್ ಸಬಲೀಕರಣ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಒಕ್ಕೂಟದ ಸಂಚಾಲಕ ಎಂ.ಕೆ ಭಟ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ ಕೆ ಭಟ್ ಕಾರ್ಯಕ್ರಮವನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಉದ್ಘಾಟಿಸಲಿದ್ದಾರೆ. ರಾಜ್ಯ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಾಧ್ಯಕ್ಷ ವಿ.ವೈ ಘೋರ್ಪಡೆ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪಂಚಾಯತ್ ರಾಜ್ ಒಕ್ಕೂಟವು ರಾಜಕೀಯ ಬೆಂಬಲಿತ ಸಂಘಟನೆಯಲ್ಲ. ಒಕ್ಕೂಟದಿಂದ ಸರಕಾರದ ಮಟ್ಟದಲ್ಲಿ ತಪ್ಪುಗಳನ್ನು ಗುರುತಿಸಿ ತಿಳಿಸುವ ಕೆಲಸ ಮಾಡುತ್ತಿದ್ದು ಇದರಿಂದ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ನಮ್ಮ ಊರಿಗೆ ಏನು ಬೇಕು ಎನ್ನುವುದನ್ನು ನಾವು ಕೇಳಿ ಪಡೆಯಲು ಈ ಒಕ್ಕೂಟ ಸಹಕಾರಿಯಾಗಿದೆ. ಈ ಹಿಂದೆ ಜೆಜೆಎಂ ಯೋಜನೆಗೆ ಗ್ರಾಮ ಪಂಚಾಯಿತಿಯಿಂದಲು ಹಣ ನೀಡಬೇಕು ಎನ್ನುವ ಸುತ್ತೋಲೆಯನ್ನು ವಿರೋಧಿಸದ್ದೇವೆ. ಸಂಘಟನೆಯಾದ ಬಳಿಕ ಚುನಾಯಿತ ಸದಸ್ಯರ ಭತ್ಯೆ ಹಾಗೂ ಗೌರವಧನ ಕೂಡ ಹೆಚ್ಚಿಸಲಾಗಿದೆ. ಇಂತಹ ಹಲವು ವಿಚಾರಗಳ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ ಎಂದರು.
ಜೆಜೆಎಂ ಯೋಜನೆ ವಿಫಲ
ಒಕ್ಕೂಟದ ಸತೀಶ ನಾಯ್ಕಮಾತನಾಡಿ, ಜಿಲ್ಲೆಯ ಮಟ್ಟಿಗೆ ಜೆಜೆಎಂ ಯೋಜನೆ ವಿಫಲವಾಗಿದೆ. ಕೆಲವೆಡೆ ಹಳೆಯ ಪೈಪುಗಳಲ್ಲಿಯೇ ನೀರು ನೀಡಲಾಗುತ್ಯಿದೆ. ಸರಿಯಾದ ನೀರಿನ ಮೂಲವಿಲ್ಲದೇ ಯೋಜನೆ ಮಾಡಿದ್ದು ಬಹಿತೇಕ ಭಾಗದಲ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರವಾಗಿಲ್ಲ. ಈ ಬಗ್ಗೆ ಜಿ.ಪಂ ಸಿಇಒ ಅವರು ಗಮನ ಹರಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸದರು.
ಕುಮಟಾ ತಾಲೂಕು ಗೌರಾವಾಧ್ಯಕ್ಷ ಅಧ್ಯಕ್ಷ ಎಸ್.ಟಿ ನಾಯ್ಕ, ಸದಾಶಿವ ಚಿಕ್ಕೋತಿ, ಪ್ರಕಾಶ, ಶ್ರೀಧರ ಪೈ, ನವೀನ ಪಟಗಾರ ಬರ್ಗಿ ಹಾಗೂ ಇತರರು ಹಾಜರಿದ್ದರು.
ಇದನ್ನೂ ಓದಿ