ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ : ಭಟ್ಕಳ ಹಾಗೂ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮೀನುಗಾರಿಕೆ ,ಬಂದರು, ಒಳನಾಡು ಜಲಸಾರಿಗೆ ಇಲಾಖೆ ಸಚಿವರಾಗಿರುವ ಮಂಕಾಳ್ ವೈದ್ಯ ಅವರ 52ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಊಟ ನೀಡುವ ಮೂಲಕ ಸಚಿವರ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಯಿತು
.

ಯುವ ಉದ್ಯಮಿ ಸಂತೋಷ ಕೇಶವ ನಾಯ್ಕ ಮುಂದಾಳತ್ವದಲ್ಲಿ ಹೊನ್ನಾವರ,‌ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಹಾಗೂ ಮುಖಂಡರ ಒಗ್ಗೂಡುವಿಕೆಯಲ್ಲಿ ಆಸ್ಪತ್ರೆಯಲ್ಲಿರುವ ಒಳ ಹಾಗೂ ಹೊರ ರೋಗಿಗಳ ಜೊತೆಗೆ ಸಾರ್ವಜನಿಕರು ಸೇರಿ ಮೂರುನೂರಕ್ಕೂ ಹೆಚ್ಚು ಜನರಿಗೆ ಊಟ ವಿತರಣೆ ಮಾಡಲಾಯಿತು. ಪ್ರತಿ ವರ್ಷ ಕೂಡ ಮಂಕಾಳ್ ವೈದ್ಯ ಅವರ ಹುಟ್ಟುಹಬ್ಬದಂದು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಊಟ ವಿತರಣೆ ಮಾಡಿಕೊಂಡು ಬರಲಾಗುತ್ತಿದ್ದು, ಅದೆ ರೀತಿ ಈ ವರ್ಷ ಕೂಡ ಊಟ ನೀಡುವ ಮೂಲಕ ಸಚಿವರ ಹುಟ್ಟುಹಬ್ಬವನ್ನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತಾಡಿದ ಯುವ ಉದ್ಯಮಿ ಸಂತೋಷ ಕೇಶವ ನಾಯ್ಕ್ ಸಚಿವರು ಬಡವರ ಬಂಧು, ಹಸಿದವರ ಪಾಲಿಗೆ ಅನ್ನಧಾನಿಗಳು ಅದಕ್ಕಾಗಿ ಇವತ್ತು ರೋಗಿಗಳಿಗೆ ಊಟಾ ನೀಡುವ ಮೂಲಕ ಅಭಿಮಾನಿಯಾಗಿ ನಾವು ಸಾರ್ಥಕಮನೋಭಾವನೆ ಮೆರೆದಿದ್ದೆವೆ..ಇವರ ಜತೆ ಕಾಂಗ್ರೆಸ್ ಮುಖಂಡ ಗೋವಿಂದ್ ನಾಯ್ಕ್ ಕೂಡಾ ಸಚಿವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ