ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಟಿಕೆಟ್ ಕೈ ತಪ್ಪಿದ ಬಳಿಕ ಸಕ್ರೀಯ ರಾಜಕೀಯದಿಂದ ದೂರ ಉಳಿದಿದ್ದ ಹಿಂದೂ ಫೈರ್ ಬ್ರ್ಯಾಂಡ್ ಅನಂತಕುಮಾರ ಹೆಗಡೆ ಅವರಿಗೆ ರಾಜಕೀಯಕ್ಕೆ ಮರಳುವಂತೆ ಹಿಂದೂ ಹೂಲಿ ಪ್ರತಾಪ್ ಸಿಂಹ ಅನಂತಕುಮಾರ ಅವರನ್ನ ಆಹ್ವಾನಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಪ್ರತಾಪ್ ಸಿಂಹ್ ತಮ್ಮ ಫೇಸ್‌ಬಕ್‌ಖಾತೆ ಮೂಲಕ ಅನಂತಕುಮಾರ ಹೆಗಡೆ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದು, ಜೊತೆಗೆ ಸಕ್ರಿಯ ರಾಜಕೀಯಕ್ಕೆ ಆಗಮಿಸುವಂತೆ ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.ಈ ಇಬ್ಬರೂ ನಾಯಕರು ಕೂಡ ಬಿಜೆಪಿಯ ಫೈರ್ ಬ್ರ್ಯಾಂಡ್ ಆಗಿದ್ದರು. ಕಳೆದ ಲೋಕಸಭಾ ಚುವಣೆಯಲ್ಲಿ ಪ್ರತಾಪ್ ಸಿಂಹ್ ತಮ್ಮ ಮೊದಲಿನ ಕ್ಷೇತ್ರ ಮೈಸೂರು, ಹಾಗೂ ಅನಂತಕುಮಾರ ಹೆಗಡೆ ಉತ್ತರ ಕನ್ನಡ ಜಿಲ್ಲೆಯಿಂದ ಮತ್ತೆ ಸ್ಪರ್ಧೆಗಿಳಿಯಲು ಮುಂದಾಗಿದ್ದರು. ಆದರೆ‌‌ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈ ಇಬ್ಬರೂ ನಾಯಕರನ್ನ ಪಕ್ಷ ಕೈ ಬಿಟ್ಟಿತ್ತು.

ಪ್ರತಾಪ್ ಸಿಂಹ್ ತಮ್ಮಗೆ ಟಿಕೆಟ್ ಕೈ ತಪ್ಪಿಸಿದ್ದರು ಪಕ್ಷದ ಚಟುವಟಿಕೆಗಳಿಂದ ದೂರವಾಗಿರಲಿಲ್ಲ.‌ ಆದರೆ ಯಾವಾಗ ಅನಂತಕುಮಾರ ಹೆಗಡೆ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನ ಪಕ್ಷ ಕಣಕ್ಕಿಳಿಸಿತ್ತೋ ಅವತ್ತಿನಿಂದ ಇವತ್ತಿನ ತನಕ ಹಿಂದೂ ಹುಲಿ ಎಂದು ಕರೆಸಿಕೊಂಡಿದ್ದ ಅನಂತಕುಮಾರ ಹೆಗಡೆ ಸಂಪೂರ್ಣವಾಗಿ ರಾಜಕೀಯದಿಂದ ದೂರ ಉಳಿದುಕೊಂಡಿದ್ದಾರೆ. ಇದೀಗ ಅನಂತಕುಮಾರ ಅಪ್ತರಾಗಿರುವ ಪ್ರತಾಪ್ ಸಿಂಹ್ ಹುಟ್ಟು ಹಬ್ಬದ ಶುಭಾಶಯ ಹೇಳುವ ವೇಳೆ ವಾಪಸ್ ರಾಜಕೀಯಕ್ಕೆ ಮರಳುವಂತೆ ಆಹ್ವಾನಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ