ಸುದ್ದಿಬಿಂದು ಬ್ಯೂರೋ‌ ವರದಿ( susuddibindudigital news)
ಮಂಗಳೂರು : ಹಿಂದೂ ಕಾರ್ಯಕರ್ತ ಹಾಗೂ  ರೌಡಿ ಶೀಟರ್ ಓರ್ವನನ್ನ ನಡು‌ರಸ್ತೆಯಲ್ಲೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ಬಜಪೆ ಕಿನ್ನಿಪದವು ಬಳಿ ನಡೆದಿದೆ.

ಸುರತ್ಕಲ್ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಹತ್ಯೆ ಎಂಬಾತನೆ ಹತ್ಯೆಯಾಗಿರುವ ವ್ಯಕ್ತಿಯಾಗಿದ್ದಾನೆ.ಈತ 2022ರ ಜುಲೈ 28ರಂದು ಸುರತ್ಕಲ್ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ  ಫಾಜಿಲ್ ಹತ್ಯೆ ನಡೆಸಲಾಗಿತ್ತು ಎನ್ನಲಾಗಿದೆ. ಇನ್ನೂ ಹಲವು ಕೊಲೆ, ಕೊಲೆಯತ್ನ ಪ್ರಕರಣದಲ್ಲಿ  ಸುಹಾಸ್ ಶೆಟ್ಟ ಆರೋಪಿಯಾಗಿದ್ದ.

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು,  ನಾಲ್ಕೈದು ಮಂದಿ ಸೇರಿ ಸುಹಾಸ್ ಶೆಟ್ಟಿಗೆ ಚಾಕುವಿನಿಂದ‌ ಚುಚ್ಚಿ ಚುಚ್ಚಿ ಹತ್ಯೆ ಮಾಡಿದ್ದು ಸದ್ಯ ಕೊಲೆ‌ ಆರೋಪಿಗಳು ಪರಾರಿಯಾಗಿದ್ದು, ಅರೋಪಿಗಳ ಬಂಧನಕ್ಕಾಗಿ ನಾಕ್ ಬಂದ್ ಮಾಡಲಾಗಿದೆ. ಈ ಹತ್ಯೆ ಬಳಿಕ ಇದೀಗ ಮಂಗಳೂರಿನಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಕೊಲೆ ಮಾಡುತ್ತಿರುವ ವಿಡಿಯೋ ಸ್ಥಳಿಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಕಷ್ಟು ವೈರಲ್ ಆಗತ್ತಿದೆ.