ಸುದ್ದಿಬಿಂದು ಬ್ಯುರೊ ವರದಿ
ಕುಮಟಾ: ಈಗಾಗಲೇ ಬಿಸಿಲ ತಾಪ ಏರಿಕೆಯಾಗಿದ್ದು, ಎಲ್ಲೆಡೆ ಕುಡಿಯುವ ನೀರಿನ ಅಭಾವ ಮಿತಿ ಮೀರಿದೆ.ಸರಕಾರದ ಮಹಾತ್ವಕಾಂಕ್ಷಿಯೋಜನೆಯಲ್ಲಿ ಒಂದಾಗಿರುವ ಜೆಜೆಎಂ ಕಾಮಗಾರಿ ಪೂರ್ಣವಾದರೂ ನೀರಿನ ತೀರಾ ಅವಶ್ಯಕವಾಗಿರು ಕಡೆ ಸಹ ನೀರು ಪೊರೈಕೆ ಮಾಡದೆ ಕೆಳ ಹಂತದ ಅಧಿಕಾರಿಗಳು ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದ್ದಾರೆ.

ಕುಮಟಾ ತಾಲೂಕಿನ ಅನೇಕ ಕಡೆಯಲ್ಲಿ ಜೆಜೆಎಂ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಆದರೆ ಇನ್ನೂ ಕೆಲವು ಭಾಗದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡು, ಒಂದೇಡು ಬಾರಿ ನೀರು ಸಹ ಬಿಟ್ಟು ತಪಾಸಣೆ ಮಾಡಲಾದೆ. ಎಲ್ಲಾ ಕಡೆ ನೀರು ಸಹ ಸರಾಗವಾಗಿ ಸರಬರಾಜು ಆಗಿದೆ ಎನ್ನಲಾಗಿದೆ. ಆದರೆ ಕೆಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವರ್ಷ ಪೂರ್ತಿ ನೀರಿನ ಸಮಸ್ಯೆ ಇದೆ. ಈ ಭಾಗದಲ್ಲಿ ಸಹ ಜೆಜೆಎಂ ಕಾಮಗಾರಿ ಎರಡು ತಿಂಗಳ ಹಿಂದೆ ಪುರ್ಣಗೊಂಡಿದೆ. ಆದರೆ ನೀರು ಸರಬರಾಜು ಮಾಡಲು ಮೀನಾಮೇಷ ಏಣಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಗುತ್ತಿಗೆದಾರರು, ಇಂಜೀನಿಯರ್ ಹಾಗೂ ಸ್ಥಳೀಯ ಅಧಿಕಾರಿಗಳ ಒಳ ಒಪ್ಪಂದದ ಮಾತು ಕಥೆ ಫಲಪ್ರದ ಆಗದೆ ಇರುವ ಕಾರಣ ಮನೆ ಮನೆಗೆ ನೀರು ಸರಬರಾಜು ಗುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಜಿಲ್ಲಾ ಉಸ್ತವಾರಿ ಸಚಿವ ಮಂಕಾಳ್ ವೈದ್ಯ ಅವರು ಹಲವು ಭಾರಿ ಜಿಲ್ಲಾಧಿಕಾರಿಗಳು ಹಾಗು ಆಯಾ ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎಲ್ಲಿಯೂ ಯಾರಿಗೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಖಡಕ್ ಸೂಚನೆ ಕೂಡ ಕೊಟ್ಟಿದ್ದಾರೆ.

ಹಿರಿಯ ಅಧಿಕಾರಿಗಳು ಸಹ ತಾಲೂಕಾ ಹಾಗೂ ಗ್ರಾಮ ಮಟ್ಟದಲ್ಲಿರುವ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಸಹ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆನ್ನಲಾಗಿದೆ. ಹೀಗಾಗಿ ಈ ಬಗ್ಗೆ ಖುದ್ದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಯತ ಸಿ ಇ ಓ ಅವರು ಖುದ್ದು ಪರಿಶೀಲನೆ ನಡೆಸಿ ಸಮಸ್ಯೆಗೆ ಪರಿಹಾರ ನೀಡಿಬೇಕಿದೆ.

ಇದನ್ನೂ ಓದಿ