ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ನಗರದ ಸಾಯಿಕಟ್ಟಾದ ಸಾಯಿ ಮಂದಿರದಲ್ಲಿ ಕಳ್ಳತನವಾಗಿದ್ದ ಬೆಳ್ಳಿ ಆಭರಣ(Silver jewelry)ಗೋವಾದ ವಾಸ್ಕೋ(Vasco)ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು,ಕಾರವಾರ ಪೊಲೀಸರು(police) ವಾಸ್ಕೋಗೆ ತೆರಳಿ ಬೆಳ್ಳಿ ಆಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಕಳ್ಳತನ ಮಾಡಿರುವ ಅರೋಪಿಗಳ ಪತ್ತೆಯಾಗಿಲ್ಲ.
ಕಾರವಾರ ನರಗರದ ಸಾಯಿಕಟ್ಟಾದಲ್ಲಿರುವ ಸಾಯಿ ಮಂದಿರಲ್ಲಿ ಕಳೆದ ಎರಡು ದಿನಗಳ ಹಿಂದೆ ಕಳ್ಳರು ದೇವಾಲಯದಲ್ಲಿರುವ ಸಾಯಿ ದೇವರ ಪಾದುಕೆ,ಸಿಂಹದ ಮೂರ್ತಿ, ಹಾಗೂ ಛತ್ರಿಗಯನ್ನ ಕಳ್ಳತನ ಮಾಡಿ ಪರಾರಿಯಾಗಿದ್ದರು. ಇಬ್ಬರೂ ಕಳ್ಳರು ಸೇರಿ ಸಾಯಿ ಮಂದಿರದಲ್ಲಿ ಕಳ್ಳತನ ಮಾಡಿರುವ ದೃಶ್ಯಾವಳಿ ದೇವಾಲಯದಲ್ಲಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಸಾಯಿ ಮಂದಿರದಲ್ಲಿ ಒಟ್ಟೂ 15 ಕೆ.ಜಿ ಗೂ ಅಧಿಕ ಬೆಳ್ಳಿ ಆಭರಣಗಳು ಕಳ್ಳತನವಾಗಿತ್ತು.
ಆದರೆ ಸಾಯಿ ಮಂದಿರದಲ್ಲಿ(Sai Temple) ಕಳ್ಳತನವಾಗಿದ್ದ ಛತ್ರಿಯನ್ನ ಕಳ್ಳರು ಗೋವಾ ರಾಜ್ಯದ ವಾಸ್ಕೋ ರೈಲ್ವೆ ನಿಲ್ದಾಣದ ಬಳಿ ಎಸೆದು ಪರಾರಿಯಾಗಿದ್ದರು. ಎನ್ನಲಾಗಿದೆ. ಕಾರವಾರದ ಸಾಯಿಬಾಬಾ ಮಂದಿರದಲ್ಲಿ ಕಳುವಾದ ಸೊತ್ತು ಎನ್ನುವುದನ್ನ ವಾಸ್ಕೋ ರೈಲ್ವೇ ಪೊಲೀಸರು ವಶಪಡಿಸಿಕೊಂಡಿದ್ದು,ಕಾರವಾರದಿಂದ ತೆರಳಿದ ಪೊಲೀಸರು ಸಾಯಿ ಮಂದಿರದ ಛತ್ರಿ ಎನ್ನುವುದನ್ನ ಖಚಿತ ಪಡಿಸಿದ್ದಾರೆ.
ಕಾರವಾರದಲ್ಲಿ ಸಾಯಿ ಮಂದಿರದಲ್ಲಿ ಕಳ್ಳತನ ಮಾಡಿರುವ ಆರೋಪಿಗಳು, ರೈಲ್ವೆ ಮೂಲಕ ಪ್ರಯಾಣ ಮಾಡಿರುವುದು ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ ಬೆಳ್ಳಿ ಆಭರಣ ಎಸೆದು ಹೋಗಿರುವುದು ಗೊತ್ತಾಗುತ್ತಿದ್ದು, ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಏನಾದರೂ ಸೆರೆಯಾಗಿದ್ದರೆ ಆರೋಪಿಗಳು ಯಾವ ರೈಲ್ವೆ ಮೂಲಕ ಪ್ರಯಾಣಿಸಿರಬಹುದು ಎನ್ನುವುದನ್ನ ಪತ್ತೆ ಹಚ್ಚಿದಲ್ಲಿ ಆರೋಪಿಗಳನ್ನ ಬಂಧಿಸುವುದು ಪೊಲೀಸರಿಗೆ ಸುಲಭವಾಗಬಹುದಾಗಿದೆ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಇದನ್ನೂ ಓದಿ