ಸುದ್ದಿಬಿಂದು ಬ್ಯೂರೋ ವರದಿ
ಸೋರಾಬಾ: ಶಾಲೆ ಕೌಂಪೌಂಡ್ ನಿರ್ಮಾಣಕ್ಕಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಿಕಾಸು,ಗುದ್ದಲಿ ಹಿಡಿದು ಮಣ್ಣು ಹೊತ್ತು ಕಾರ್ಮಿಕರಂತಡ ಕೆಲಸ ಮಾಡಿದರು. ಸಚಿವ ಮಧು ಬಂಗಾರಪ್ಪ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತವಾಗಿದೆ..
ಸೋರಬಾ ತಾಲೂಕಿನ ಹುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೌಂಪೌಂಡ ಮತ್ತು ಅಡಿಗೆ ಮನೆ ನಿರ್ಮಾಣಕ್ಕಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಗುದ್ದಲಿ ಪೂಜೆಯ ನಂತರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವೈಯಕ್ತಿಕವಾಗಿ ಗುದ್ದಲಿ, ಪಿಕಾಸಿ ಹಿಡಿದರು. ಮಣ್ಣು ತುಂಬಿದ ಅದನ್ನು ತಾವು ಕೈಗೆತ್ತಿಕೊಂಡು ಶ್ರಮಿಕರಂತೆ ದುಡಿದರು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಶಾಲಾ ಕೌಂಪೌಂಡ ನಿರ್ಮಾಣಕ್ಕಾಗಿ ಹಣ ಬಿಡುಗಡೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ಇಂದು ಕೂಲಿಕಾರರಂತೆ ಕೆಲಸ ಮಾಡಿದ ಘಟನೆ ಗಮನಸೆಳೆಯಿತು..
ಇದನ್ನೂ ಓದಿ