ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ರಾಜ್ಯ ಸರಕಾರ ಜನತೆಗೆ ನೀಡುತ್ತಿರುವ ಉಚಿತ ಸೇವೆಯ ಬಗ್ಗೆ ವಿರೋಧ ಪಕ್ಷದ ನಾಯಕರು ವಿರೋಧಿಸುತ್ತಲೆ ಬಂದಿದ್ದಾರೆ. ಆದರೆ ಇದೀಗ ಆಡಳಿತ ಪಕ್ಷದ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಆರ್ ವಿ ದೇಶಪಾಂಡೆ ಉಚಿತ ಯೋಜನೆಗಳ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.
ಸರಕಾರದಿಂದ ಉಚಿತವಾಗಿ ಕೊಡುವ ಕೊಡುಗೆಗಳು ತುಂಬಾ ಅಪಾಯಕಾರಿಯಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ದಾಂಡೇಲಿಯಲ್ಲಿ ನೂತನವಾಗಿ ನಿರ್ಮಿಸಲಾದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಉದ್ಘಾಟನಾ ಸಮಾರಂಭದ ಸಮಯಲ್ಲಿ ಸರಕಾರದ ಉಚಿತ ಯೋಜನೆಯ ಬಗ್ಗೆ ತಮ್ಮ ಆಕ್ಷೇಪವನ್ನ ವ್ಯಕ್ತಪಡಿಸಿದ್ದಾರೆ.ಯಾವುದನ್ನ ಸಹ ಉಚಿತವಾಗಿ ನೀಡಬಾರದು, ಏನೆ ನೀಡಿದರು ಅದಕ್ಕೆಲ್ಲಾ ಹಣ ನಿಗದಿ ಮಾಡಬೇಕು..
ಈಗಾಗಲೇ ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಅದರ ಲಾಭವನ್ನ ಪಡೆದುಕೊಂಡಿದ್ದಾರೆ. ಸ್ತ್ರೀಯರಿಗೆ ಬಸ್ಗಳಲ್ಲಿ ಉಚಿತ ಸೇವೆ ನೀಡಿದಂತೆ ಪುರುಷರು ಕೂಡ ತಮ್ಮಗೂ ಉಚಿತವಾಗಿ ಪ್ರಯಾಣಿಸೋದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು.ಆದರೆ ಎಲ್ಲರಿಗೂ ಉಚಿತವಾಗಿ ನೀಡುತ್ತಾ ಹೋದರೆ ಸಾರಿಗೆ ಸಂಸ್ಥೆಯ ನಡೆಸುವುದು ಬಹಳ ಕಷ್ಟವಾಗಬಹುದು. ಹೀಗಾಗಿ ಈ ಉಚಿತ ಯೋಜನೆ ತುಂಬಾ ಅಪಾಯಕಾರಿಯಾಗಿದೆ ಅಂತಾ ಹೇಳಿದ್ದಾರೆ.
ಇದನ್ನೂ ಓದಿ