ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕಳೆದ‌ ಎರಡು ದಿನಗಳ ಹಿಂದೆ ಪಟ್ಟಣದ ಪಿಕಪ್‌ ಬಸ್‌ ನಿಲ್ದಾಣದ ಬಳಿ ಇಂದ ನಾಪತ್ತೆಯಾಗಿದ್ದು, ಇದುವರೆಗೂ ಆತನ ಸುಳಿವು ಪತ್ತೆಯಾಗಿಲ್ಲ.

ಸಂತೆಗುಳಿ ಗ್ರಾಮದ ಮಂಜುನಾಥ ಮದೇವ ನಾಯ್ಕ ಎಂಬಾತನೆ‌ ನಾಪತ್ತೆಯಾಗಿದ್ದ ಯುವಕನಾಗಿದ್ದು, ಈತ ಮಾರ್ಚ್ ,17ರಂದು ತಂದೆಯ ಜೊತೆಯಲ್ಲಿ ಪಟ್ಟಣದ ಪಿಕಪ್‌ ಬಸ್‌ನಿಲ್ದಾಣದ ಬಳಿ‌‌ ಟೆಂಪೋದಲ್ಲಿ ಇದ್ದ‌ ಎನ್ನಲಾಗಿದೆ.‌ ಅಂದು ಸಂಜೆ‌ 5ಗಂಟೆ‌ ಸುಮಾರಿಗೆ ಯುವಕ‌ ಇದ್ದ ಸ್ಥಳದಿಂದಲ್ಲೆ‌ ನಾಪತ್ತೆಯಾಗಿದ್ದಾನೆ.ಆತನ ಬಳಿ ಮೊಬೈಲ್ ಸಹ ಇದ್ದು, ಯುವಕ ನಾಪತ್ತೆಯಾದ ಸ್ಥಳದಿಂದ 500ಮೀಟರ‌ ಆಸುಪಾಸಿನಲ್ಲೆ ಆತನ ಬಳಿಕ ಇದ್ದ ಮೊಬೈಲ್ ಸ್ವೀಚ್ ಆಪ್ ಆಗಿದೆ.‌

ಯುವಕ ನಾಪತ್ತೆಯಾದ ಮರು ದಿನ ಮತ್ತೆ ಒಮ್ಮೆ ಮೊಬೈಲ್ ಸ್ವೀಚ್ ಆನ್‌ ಆಗಿತ್ತು ಎನ್ನಲಾಗಿದ್ದು, ನಂತರದಲ್ಲಿ ಆಪ್ ಆದ ಮೊಬೈಲ್ ಈ ಕ್ಷಣದ ವರೆಗೆ ಆನ್ ಆಗಿಲ್ಲ.‌ಎನ್ನಲಾಗಿದೆ. ಯುವಕ ‌ನಾಪತ್ತೆಯಾಗಿರುವ ಬಗ್ಗೆ ಆತನ ಕುಟುಂಬದವರು ಕುಮಟಾ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.‌ ನಾಪತ್ತೆಯಾಗಿರುವ ಯುವಕ ತನ್ನ ಮೊಬೈಲ್ ಸ್ವೀಚ್ ಆಪ್‌ ಮಾಡಿ,‌ ಮನೆಯವರಿಗೆನಾದರೂ ಹೆದರಿಸಬೇಕು ಎನ್ನುವ ಕಾರಣಕ್ಕೆ ಕುಮಟಾ ಪಟ್ಟಣದ ಆಸುಪಾಸಿನಲ್ಲೆ ಎಲ್ಲಾದರೂ ಇರಬಹುದು ಎಂದು ಕುಟುಂಬಸ್ಥರ ಅನಿಸಿಕೆಯಾಗಿದ್ದು,ಪೊಲೀಸರು ಈ ಬಗ್ಗೆ ಹೆಚ್ಚಿನ‌ ಮುತುವರ್ಜಿ ವಹಿಸಿ ಯುವಕ ಪತ್ತೆ ಕಾರ್ಯ ಮಾಡಬೇಕಿದೆ.

ಇದನ್ನೂ ಓದಿ