ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಜೆಜೆ‌ಎಂ ಕುಡಿಯುವ ನೀರಿನ ಯೋಜನೆ‌ಯ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದಿದ್ದು, ಉತ್ತರಕನ್ನಡ ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ನೀರು ಬಾರದೆ ನಲ್ಲಿ ತುಕ್ಕು ಹಿಡಿಯುವಂತಾಗಿದೆ.

ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಜನ ಹನಿ ನೀರಿಗಾಗಿ ಕೊಡ ಹಿಡಿದು,ಕೇರಿ ಕೇರಿ ಅಲೆದಾಡಬೇಕಾಗಿದೆ.‌ಟ್ಯಾಂಕರ್‌ ಮೂಲಕವಾದರೂ ಜಿಲ್ಲಾಡಳಿತ ನೀರು ಸರಬರಾಜು ಮಾಡಬಹುದು ಎಂದು ಕೊಂಡರೆ ಅದು ಸಹ ಇನ್ನೂ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ.ಈ ಜೆಜೆ‌ಎಂ ಕಾಮಗಾರಿ ಮನೆ ಎದುರು ಹಾಕಲಾಗಿರುವ ಜೆಜೆ‌ಎಂ‌ನ ನಲ್ಲಿಯಲ್ಲಿ ನೀರು ಇಂದು ಬರಬಹುದು ನಾಳೆ ಬರಬಹುದು ಎಂದು ಹೇಳುತ್ತಲೇ ಅನೇಕ ತಿಂಗಳು ಕಳೆದು ಹೋಗಿದೆ.ಆದರೆ ನಲ್ಲಿಗಳಲ್ಲಿ ನೀರು ಮಾತ್ರ ಹರಿಯುತ್ತಿಲ್ಲ.

ದಿನದಿಂದ‌ ದಿನಕ್ಕೆ ಬಿಸಿಲ‌ ತಾಪ‌ಮಾನ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಮಾರ್ಚ್ ತಿಂಗಳಲ್ಲೇ ಕೆರೆ, ಬಾವಿಗಳಲ್ಲಿನ ನೀರು ಬತ್ತಲಾರಂಭಿಸಿದೆ.ಮಳೆಗಾಲ‌ ಆರಂಭಕ್ಕೆ ಇನ್ನೂ ಎರಡುವರೆ ತಿಂಗಳು ಕಳೆಯಬೇಕಿದೆ.ಯೋಜನೆಯ ಗುತ್ತಿಗೆ ಪಡೆದವರನ್ನ‌‌ ಕೇಳಿದ್ದರೆ ಎಲ್ಲಿಂದ ನೀರು ಪೊರೈಸಬೇಕು ಅವರೆ ನೀರು ಕೊಡಲು ಮನಸ್ಸು ಮಾಡುತ್ತಿಲ್ಲ.‌ಇದರಿಂದಾಗಿ ಮನೆ ಮನೆಗೆ ನೀರು ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಉತ್ತರ ನೀಡುತ್ತಿದ್ದಾರೆ. ಇವರ ಮಾತುಗಳನ್ನ ಕೇಳಿದ್ದರೆ ಈ ವರ್ಷದಲ್ಲೂ ಜೆಜೆ‌ಎಂ ನಲ್ಲಿಗಳಲ್ಲಿ ನೀರು ಹೊರ ಬಿಳುವ ಸಾಧ್ಯತೆ ಕಂಡು ಬರುತ್ತಿಲ್ಲ. ಈಗಾಗಲೇ‌ ಬಾವಿ ನೀರು ಸಹ ಬತ್ತಿ ಹೋಗುತ್ತಿರುವುದರಿಂದ ಮುಂದಿನ ಜನ ಹನಿ ನೀರಿಗಾಗಿ ಊರೂರು ಅಲೆದಾಡ ಬೇಕಾದ ಪರಿಸ್ಥಿತಿ ಎದುರಾಗಿಲಿದೆ.

ಅಧಿಕಾರಿಗಳು ಮೌನ‌‌
ಜೆಜೆ‌ಎಂ ಯೋಜನೆ ಹಳ್ಳ ಹಿಡಿಯುತ್ತಿದ್ದರು ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಜೆಜೆಎಂ ನೀರು ಸರಬರಾಜು‌ ಆಗದೆ ಇರುವ ಬಗ್ಗೆ ಅನೇಕರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗುತ್ತಿರುವಂತೆ ಕಾಣುತ್ತಿಲ್ಲ.‌ ಎಸಿ ರೂಂ‌ಗಳಲ್ಲಿ ಕುಳಿತು ಅಧಿಕಾರ ನಡೆಸವ ಅಧಿಕಾರಿ ವರ್ಗದವರಿಗೆ ಜನರಿಗೆ ಆಗುತ್ತಿರುವ ನೀರಿನ ಸಮಸ್ಯೆಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಜನ ಹಾದು ಬೀದಿಯಲ್ಲಿ ಆಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ