ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ದೆಹಲಿಯಲ್ಲಿ ಮಾರ್ಚ್ 02 ರಿಂದ 07 ರವರೆಗೆ ನಡೆದ ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ರಾಷ್ಟ್ರೀಯ ಸಾಂಸ್ಕೃತಿಕ ಮೇಳಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ವಿಭಾಗದಲ್ಲಿ ಕೊಳಲುವಾದನ ಸ್ಪರ್ಧೆಯಲ್ಲಿ ಚಿತ್ರಲೇಖಾ ಮಂಜುನಾಥ ನಾಯ್ಕ ಆಯ್ಕೆಯೊಂದಿಗೆ 2025 ರ ಅಂತರರಾಷ್ಟ್ರೀಯ ಸಾಂಸ್ಕೃತಿಕ ಯುವ ಮೇಳಕ್ಕೆ ಆಯ್ಕೆಯಾಗಿದ್ದಾರೆ.

ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಳವೇಕೋಡಿ ಗ್ರಾಮದವರಾಗಿದ್ದು, ಸುವರ್ಣಾ ಮಂಜನಾಥ ದಂಪತಿಗಳ ಪುತ್ರಿಯಾಗಿದ್ದಾರೆ.

ಹೈಸ್ಕೂಲ್ ಹಂತದ ಧಾರವಾಡ ಜಿಲ್ಲಾ ಪ್ರತಿಭಾ ಕಾರಂಜಿಯಲ್ಲಿ ಭಕ್ತಿ ಗೀತೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯೊಂದಿಗೆ ಸಂಗೀತದತ್ತದಲ್ಲಿ ಇನ್ನಷ್ಟು ಆಶಕ್ತಿ ಬೆಳಸಿಕೊಂಡಿದ್ದರು. ಬಾಲ್ಯದಲ್ಲಿ ತಂದೆಯವರಿಂದಲೇ ಚಿತ್ರಕಲೆ, ತಬಲಾ, ಕೊಳಲುವಾದನದ ಪ್ರಾರಂಭ ಹಂತವನ್ನು ಅಭ್ಯಸಿಸತೊಡಗಿದ್ದು ಪ್ರಸ್ತುತ ಕೆಲವು ವರ್ಷಗಳಿಂದ ಶ್ರೀಹರೀಶ ಕುಲಕರ್ಣಿಯವರಲ್ಲಿ ನಿರಂತರ ಕೊಳಲು ವಾದನದ ಅಧ್ಯಯನ ಕೈಗೊಂಡಿದ್ದಾರೆ.

ಪ್ರಸ್ತುತ SJMVS ಮಹಿಳಾ ಕಾಲೆಜ್ ಹುಬ್ಬಳ್ಳಿಯಲ್ಲಿ B.A ತೃತಿಯ ವಿಭಾಗದಲ್ಲಿ ಸಂಗೀತವನ್ನು ಪ್ರಧಾನ ವಿಷಯವಾಗಿ ಅಧ್ಯಯನ ಮಾಡುತ್ತಿದ್ದು, ಮುಖ್ಯವಾಗಿ ಧಾರವಾಡ ಶ್ರೀಆಶ್ರಮದಲ್ಲಿ ನೀಡಿದ ಕಾರ್ಯಕ್ರಮ, ಧಾರವಾಡ ಸಾಂಸ್ಕೃತಿಕ ಉತ್ಸವ ಸ್ವರಾಂಜಲಿ ಸಂಗೀತ ಕಾರ್ಯಕ್ರಮ. ಹಂಪಿ ಯುನಿವರ್ಸಿಟಿಯ ಸಂಗೀತ ಕಾರ್ಯಗಾರದಲ್ಲಿ ನೀಡಿದ ಕೊಳಲುವಾದನ ಹಾಗೂ ಧಾರವಾಡ ಕಲಕೇರಿಯಲ್ಲಿ ನಡೆದ ರಾಷ್ಟ್ರೀಯ ಸಂಗೀತ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದಾರೆ.

ಹಾಗೆಯೇ 2023ರಲ್ಲಿ ಮತ್ತು 2024 ಮತ್ತು 2025 ರಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ದಿಂದ ನಡೆದ ಯುವ ಮೇಳದಲ್ಲಿ ಸತತವಾಗಿ ಮೂರುಬಾರಿ ತಬಲಾ ಹಾಗೂ ಕೊಳಲುವಾದನದಲ್ಲಿ ಪ್ರಥಮಸ್ಥಾನ ಪಡೆದಿರುತ್ತಾರೆ.

2024-2025 ರಲ್ಲಿ ನಡೆದ ಧಾರವಾಡ ಜಿಲ್ಲೆಯ ಸಖಿ ಸಂಗಮ ಕಾರ್ಯಕ್ರಮದಲ್ಲಿ ಭಕ್ತಿಗಿತೆಯಲ್ಲಿ ಪ್ರಥಮ ಸ್ಥಾನ, 2023 ರಲ್ಲಿ ಸಚಿವ ದಕ್ಷಿಣ ಭಾರತ ಮತ್ತು ಪೂರ್ವರಾಜ್ಯಗಳ ಸಮ್ಮಿಳನದೊಂದಿಗೆ ನಡೆದ ಯುವ ಉತ್ಸವದ ಸ್ಪರ್ಧೆಯಲ್ಲಿ ಕೊಳಲುವಾದನದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

2023ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಹಿರಿಯರ ರಾಷ್ಟ್ರೀಯ ಯುವಜನ ಮೇಳದ ಉದ್ಘಾಟನೆಗೆ ಪ್ರಧಾನಿ ಮೋದಿಯವರು ಆಗಮಿಸುವ ಸಮಯದಲ್ಲಿ ನೀಡಿದ ಕೊಳಲುವಾದನ ಹಾಗೂ 2024 ಮಾರ್ಚ್‌ನಲ್ಲಿ ನಡೆದ ಕದಂಬೋತ್ಸವದಲ್ಲಿ ನೀಡಿದ ಕೊಳಲುವಾದನ ಹಾಗೂ ಶ್ರೀಮತಿ ಸೌಭಾಗ್ಯಲಕ್ಷ ವಸಂತರಾವ, ಜಾಜಿ ಸಂಗೀತ ವಿದ್ಯಾರ್ಥಿ ಶಿಷ್ಯವೇತನ ಮತ್ತು ಪುರಸ್ಕಾರವನ್ನು ಧಾರವಾಡದಲ್ಲಿ ಉಸ್ತಾದ ಬಾಲೆಖಾನ ಸ್ಮರಣಾರ್ಥ ಸಂಗೀತ ಸಂಮ್ಮೇಳನದಲ್ಲಿ ಡಿಸೇಂಬರ 02-2024 ರಂದು ಖ್ಯಾತ ಗಾಯಕಿ ಅಶ್ವಿನಿ ಬಿಡೆಯವರಿಂದ ಪಡೆಯುವುದರೊಂದಿಗೆ 2024-2025 ರಲ್ಲಿ ನಡೆದ ದಕ್ಷಿಣ ಭಾರತ ಮತ್ತು ಪೂರ್ವ ರಾಜ್ಯಗಳ ಯುವ ಮೇಳದಲ್ಲಿ ಕೊಳಲು ವಾದನದಲ್ಲಿ 2ನೇ ಪಡೆಯುವದರೊಂದಿಗೆ, ಅಖಿಲ ಭಾರತ ವಿಶ್ವವಿದ್ಯಾನಿಲಗಳ ರಾಷ್ಟ್ರೀಯ ಸಾಂಸ್ಕೃತಿಕ ಯುವ ಮೇಳ ಮಾರ್ಚ್ 2 ರಿಂದ ಮಾರ್ಚ 7 ರ ವರೆಗೆ ದೆಹಲಿಯಲ್ಲಿ ನಡೆದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಕೊಳಲುವಾದನ ಸ್ಪರ್ಧೆಯಲ್ಲಿ ಭಾಗವಹಿಸುವುದರೊಂದಿಗೆ, ಸ್ಪರ್ಧೆಯಲ್ಲಿ ಆಯ್ಕೆ ಹೊಂದುವುದರೊಂದಿಗೆ 2025 ರಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯುವ ಸಾಂಸ್ಕೃತಿಕ ಸಂಗೀತ ಮ್ಮೇಳನಕ್ಕೆ ಆಯ್ಕೆ ಯಾಗಿರುವುದ ಕೊದಿಗೆ ಕೊಳಲು ದನ ಸಂಗೀತದತ್ತ ಮುನ್ನಡೆಯುತ್ತಿದ್ದಾರೆ.

ಇದನ್ನೂ ಓದಿ