ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಮೈಸೂರಿನ  ಪುರುಷರು ಪುರುಷರಿಗೆ ಮೀಸಲಾದ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಪ್ರಯಾಣಿಕರಿಗೆ ಸೂಚನೆ ನೀಡುವಂತೆ ಸಿಬ್ಬಂದಿಗಳಿಗೆ ಕೇಸ್ಆ‌ರ್‌ಟಿಸಿ ಮೈಸೂರು ಘಟಕದಿಂದ ಸೂಚನೆ ನೀಡಿದೆ.

ಶಕ್ತಿ ಯೋಜನೆಯ ಅನುಷ್ಠಾನವಾದ ಬಳಿಕ, ರಾಜ್ಯ ಸರ್ಕಾರಿ ಬಸ್‌ಗಳನ್ನು ಮಹಿಳಾ ಬಸ್‌ಗಳಾಗಿ ಪರಿವರ್ತಿಸಲಾಗಿದೆ. ಉಚಿತ ಪ್ರಯಾಣ ಘೋಷಣೆಯಾದ ನಂತರ, ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಿದೆ. ಇದರಿಂದಾಗಿ ಪುರುಷರಿಗೆ ಸೀಟುಗಳು ದೊರಕುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹಿಂದಿನ ದಿನಗಳಲ್ಲಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿರಲಿಲ್ಲ.ಹಣ ಪಾವತಿಸಿ ಟಿಕೆಟ್‌ ತೆಗೆದುಕೊಂಡರೂ ಕೂಡ ಸೀಟು ದೊರಕುತ್ತಿಲ್ಲ. ಕೆಲವೆಡೆ 60-70 ಕಿಮೀ ನಿಂತು ಪ್ರಯಾಣಿಸುವ ಸ್ಥಿತಿಯು ನಿರ್ಮಾಣವಾಗಿದೆ ಎಂದು ಪುರುಷರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಬಸ್‌ನಲ್ಲಿ ನಿಂತು ಪ್ರಯಾಣಿಸಿದ ಮೈಸೂರಿನ ನಿವಾಸಿ ವಿಷ್ಣುವರ್ಧನ್ ಅವರು, ಪುರುಷರಿಗೆ ಕೂಡ ಸೀಟು ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಮೈಸೂರು ಘಟಕಕ್ಕೆ ದೂರು ನೀಡಿದ್ದಾರೆ. ಮೈಸೂರು ನಗರ ಸಾರಿಗೆ ನಿಗಮದ ಹೆಚ್ಚಿನ ಬಸ್‌ಗಳಲ್ಲಿ ಮಹಿಳೆಯರು ಆಕ್ರಮಿಸಿಕೊಂಡಿದ್ದಾರೆ. ನಾವು ಸೀಟು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮಗೂ ಕುಳಿತುಕೊಳ್ಳಲು ಸೀಟು ನೀಡುವಂತೆ ದಯವಿಟ್ಟು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈ ದೂರು ಹಿನ್ನೆಲೆಯಲ್ಲಿ, ಕೆಎಸ್‌ಆರ್‌ಟಿಸಿ ಮೈಸೂರು ಘಟಕದ ಸಂಬಂಧಿತ ಘಟಕಗಳ ನಿಯಂತ್ರಕರು, ಬಸ್‌ಗಳಲ್ಲಿ ಪುರುಷರಿಗೆ ಮೀಸಲಾದ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಖಚಿತಪಡಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ಇದರ ಹೊರತಾಗಿ, ಈ ಸಂಬಂಧ ಕೈಗೊಳ್ಳಲಾದ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಮೈಸೂರು ವಿಭಾಗದ ನಿಯಂತ್ರಕರು ಸಿಬ್ಬಂದಿಗೆ ಆದೇಶಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ “ಮಹಿಳಾ ಸೀಟು” ಎಂದು ಮಾತ್ರ ಬರೆಯಲಾಗಿದೆ. ಪುರುಷರ ಆಸನ ಎಲ್ಲಿ ಎಂಬುದು ಸ್ಪಷ್ಟವಾಗಿ ಬರೆದಿಲ್ಲ. ಪುರುಷರ ಆಸನಗಳ ಬಗ್ಗೆ ಸರಿಯಾದ ಸ್ಪಷ್ಟತೆ ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಬೇಕು. ಶಕ್ತಿ ಯೋಜನೆಯ ಅನುಷ್ಠಾನವಾದ ಬಳಿಕ, ಸರಕಾರವು 50% ಆಸನಗಳನ್ನು ಪುರುಷರಿಗೆ ಮೀಸಲಿಟ್ಟಿದೆ. ಆದ್ದರಿಂದ ಎಲ್ಲಾ ಬಸ್‌ಗಳಲ್ಲಿ ಅರ್ಧ ಆಸನಗಳನ್ನು ಪುರುಷರಿಗೆ ಮೀಸಲಿಟ್ಟಿರಬೇಕು. ಆದರೆ ಈ ನಿಯಮವನ್ನು ಸರಿಯಾಗಿ ಪಾಲಿಸಲಾಗುತ್ತಿಲ್ಲ.

ಪುರುಷರ ಆಸನ ಎಂದು ಸ್ಪಷ್ಟವಾಗಿ ಬೋರ್ಡ್ ಹಾಕಿದರೆ ಯಾವುದೇ ಸಮಸ್ಯೆ ಇರದು. ಆದರೆ, ಮಹಿಳೆಯರು ಕುಳಿತಿರುವ ಸೀಟಿನಿಂದ ಅವರನ್ನು ಎಬ್ಬಿಸಿದರೆ, “ನಿಮ್ಮಿಂದೇಕೆ ನಾವು ಎಳಬೇಕೆ?” ಎಂದು ಪ್ರಶ್ನೆ ಉದ್ಭವಿಸಿ ಗಲಾಟೆಯ ಸ್ಥಿತಿ ನಿರ್ಮಾಣವಾಗಬಹುದು.

ಇದನ್ನೂ ಓದಿ