ಸುದ್ದಿಬಿಂದು ಬ್ಯೂರೋ ವರದಿ
ಬನವಾಸಿ: ಶಿರಸಿ ತಾಲೂಕಿನ ಬನವಾಸಿಯಲ್ಲಿ ಅಕ್ರಮ ಮದ್ಯ,ಓಸಿ,ಮರಳು ದಂಧೆ ನಡೆಯುತ್ತಿರುವ ಬಗ್ಗೆ ಅನೇಕ ದಿನಗಳಿಂದ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳ ಬಳಿ ದೂರಿದ್ದರೂ ಯಾವುದೇ ಕ್ರಮ ಆಗದೆ ಇರುವ ಹಿನ್ನಲೆಯಲ್ಲಿ ಇಂದು ಕಾರವಾರದಿಂದ ಎಸ್ಪಿ ಸ್ಕ್ವಾಡ್ ತಂಡ ದಾಳಿ ನಡೆದಿ ಹಲವರನ್ನ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಬನವಾಸಿ ಭಾಗದಲ್ಲಿ ಕಳೆದ ಅನೇಕ ದಿನಗಳಿಂದ ಸ್ಥಳೀಯ ಪೊಲೀಸರ ಭಯವಿಲ್ಲದೆ ಓಸಿ-ಮಟ್ಕಾ, ಕಳ್ಳಬಟ್ಟಿ, ಸೇರಿದಂತೆ ಇನ್ನೂ ಅನೇಕ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಬನವಾಸಿ ಭಾಗದ ನಾಗರಿಕರಿ ಅನೇಕ ಬಾರಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆದರೆ ಅಕ್ರಮ ದಂಧೆಯ ಬಗ್ಗೆ ಸಾರ್ವಜನಿಕರು ದಾಖಲೆ ಸಹಿತ ಮಾಹಿತಿ ನೀಡಿದ್ದರೂ ಸಹ ಅಲ್ಲಿ ಠಾಣಾಧಿಕಾರಿಯಾದವರು ಅಕ್ರಮ ದಂಧೆಗೆ ಕಡಿವಾಣ ಹಾಕದೆ ಸುಮ್ಮನಾಗಿದ್ದರು ಎಂದು ಆರೋಪಿಸಲಾಗುತ್ತಿದೆ.SP ಅವರ ಮಾರ್ಗದರ್ಶನದಲ್ಲಿ ಬನವಾಸಿಯಲ್ಲಿ dysp ಅಶ್ವಿನಿ ನೇತೃತ್ವದಲ್ಲಿ ಮಟ್ಕಾ ಅಡ್ಡೆಗಳ ಮೇಲೆ ಜಿಲ್ಲಾ ಪೊಲೀಸ್ ತಂಡ ದಾಳಿ ಹಲವರ ಬಂಧಿಸಿದೆ.
ಈ ಹಿನ್ನಲೆಯಲ್ಲಿ ಸ್ಥಳೀಯರು ಬನವಾಸಿಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಯ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದರು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿಂದು ಎಸ್ಪಿ ಸ್ಕ್ವಾಡ್ ಬನವಾಸಿಯಲ್ಲಿ ಅಕ್ರಮ ದಂಧೆಕೋರರ ವಿರುದ್ಧ ಶಮರ ಸಾರಿದ್ದಾರೆ.
ಇದನ್ನೂ ಓದಿ