ಸುದ್ದಿಬಿಂದು ಬ್ಯೂರೋ ವರದಿ
ದೆಹಲಿ ; ಸಾಕಷ್ಟು ಕೂತುಹಲಕ್ಕೆ‌ ಕಾರಣವಾಗಿದ್ದ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಘೋಷಿಸಲಾಗಿದೆ. 47 ಸ್ಥಾನಗಳನ್ನು ಗೆದ್ದ ಬಳಿಕ, ದೀರ್ಘ ಅವಧಿಯ ನಂತರ ಬಿಜೆಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ.ಹ್ಯಾಟ್ರಿಕ್ ವಿಜಯದ ನಿರೀಕ್ಷೆಯಲ್ಲಿದ್ದ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ನಿಖರವಾಗಿ 27 ವರ್ಷಗಳ ಬಳಿಕ ಬಿಜೆಪಿ ದೆಹಲಿಯಲ್ಲಿ
ಪೊರಕೆ ಗುಡಿಸಿ,ಕಮಲ ಮುಡಿದ ದೆಹಲಿ ಮತದಾರರು,

ಆಪ್ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಆಪ್‌ನ ಹಲವಾರು ಪ್ರಮುಖ ನಾಯಕರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲಾಗಿದೆ. ಆಪ್‌ನ ಭಾರೀ ಸೋಲಿನ ಜೊತೆಗೆ, ಒಂದು ಕ್ಷೇತ್ರದಲ್ಲೂ ಖಾತೆ ತೆರೆಯದ ಕಾಂಗ್ರೆಸ್ ಪಕ್ಷಕ್ಕೂ ಭಾರೀ ಅವಮಾನವಾಗಿದೆ. ದೆಹಲಿಯ ಜನರ ತೀರ್ಪನ್ನು ನಾವು ಸ್ವೀಕರಿಸಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಸಿಎಂ ಯಾರು?
ಬಿಜೆಪಿಯು ದೆಹಲಿ ಚುನಾವಣೆಯಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಆದ್ದರಿಂದ ದೆಹಲಿಯ ಹೊಸ ಸಿಎಂ ಯಾರು ಎಂಬ ಕುತೂಹಲ ಮೂಡಿದೆ. ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚದೇವ್ ಈ ಕುರಿತು ಮಾತನಾಡಿ, “ಯಾರು ಸಿಎಂ?” ಎಂಬ ಪ್ರಶ್ನೆಗೆ ಹೈಕಮಾಂಡ್ ತೀರ್ಮಾನವೇ ಉತ್ತರ ಎಂದು ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಕೆಲವು ನಾಯಕರ ಹೆಸರು ಕೇಳಿ ಬರುತ್ತಿವೆ. ಹೊಸ ದೆಹಲಿ ಕ್ಷೇತ್ರದಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ಪ್ರವೇಶ್ ಸಾಹಿಬ್ ಸಿಂಗ್ ವರ್ಮಾ ಮುಖ್ಯಮಂತ್ರಿ ಸ್ಪರ್ಧಿಯಲ್ಲಿದ್ದಾರೆ.

ಇವರ ಜೊತೆಗೆ ದೆಹಲಿಯ ರೋಹಿಣಿ ಕ್ಷೇತ್ರದಲ್ಲಿ  ಸತತವಾಗಿ ವಿಜಯಗಳಿಸಿರುವ ಹಿರಿಯ ಬಿಜೆಪಿ ನಾಯಕ ವಿಜಯೇಂದ್ರ ಗುಪ್ತಾ ಕೂಡ ಸಿಎಂ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ. ಆಮ್ ಆದ್ಮಿ ಪಕ್ಷವೇ “ಬಿಜೆಪಿ ಗೆದ್ದರೆ ರಮೇಶ್ ಬಿಧೂರಿಯನ್ನ ಸಿಎಂ ಮಾಡಲಾಗುತ್ತದೆ” ಎಂದು ಹೇಳಿತ್ತು. ಈಗ ಅವರ ಹೆಸರೂ ಮುಖ್ಯಮಂತ್ರಿಯ ಹುದ್ದೆಗೆ ಪರಿಗಣನೆಯಲ್ಲಿದೆ.

ದೆಹಲಿಯಲ್ಲಿ ಬಿಜೆಪಿ ಗೆದ್ದರೆ ರಮೇಶ್ ಬಿಧುರಿ ಅವರನ್ನ ಬಿಜೆಪಿ ಸಿಎಂ ಮಾಡಲಿದೆ ಎಂದು ಆಮ್ ಆದ್ಮಿ ಪಕ್ಷವೇ ಹೇಳಿತ್ತು. ಇದೀಗ ಅವರ ಹೆಸರೂ ಸಹ ಸಿಎಂ ಹುದ್ದೆ ರೇಸ್‌ನಲ್ಲಿದೆ. ಇದಲ್ಲದೆ ರಾಜೌರಿ ಗಾರ್ಡನ್‌ನಿಂದ ಮಜೀಂದರ್ ಸಿಂಗ್ ಸಿರ್ಸಾ ಮತ್ತು ಕರೋಲ್ ಬಾಗ್‌ನಿಂದ ದುಷ್ಯಂತ್ ಗೌತಮ್ ಅವರ ಹೆಸರುಗಳು ಸಹ ಕೇಳಿಬರುತ್ತಿವೆ.

ಇದನ್ನೂ ಓದಿ