ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಹೊನ್ನಾವರದ ಸಾಲ್ಕೋಡ್ ನಲ್ಲಿ ಗರ್ಭ ಧರಿಸಿದ್ದ ಗೋವನ್ನು ಸಾಯಿಸಿ ಮಾಂಸ ಹೊತ್ತೊಯ್ದ ಪ್ರಕರಣಕ್ಕೆ ಈಗ ಭಟ್ಕಳ ತಂಝೀಮ್ ಸದಸ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.
ಇಂದು ಕಾರವಾರದ ಪತ್ರಕಾಭವನದ್ದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ತಂಝೀಮ್ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಭಟ್ಕಳದ ಮುಸ್ಲೀಮರು ಗೋಮಾಂಸ ಸೇವಿಸುತ್ತಾರೆ. ಆದರೆ ಕದ್ದ ಮಾಂಸ ಭಕ್ಷಣೆ ಮಾಡುವುದು ನಮ್ಮ ಧರ್ಮದಲ್ಲಿ ಹರಾಮ್ ಆಗಿದೆ. ಆದ್ದರಿಂದ ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ ಎಂದರು.
ಇನ್ನು ಜಿಲ್ಲೆಯಲ್ಲಿ ಗೋ ಕಳ್ಳತನ ಪ್ರಕರಣ ಹೆಚ್ಚಾಗಿದ್ದು ಈ ಗೋ ಕಳ್ಳರ ಬಂಧಿಸುವಲ್ಲಿ ಪೋಲಿಸರಿಗೆ ನಾವು ಸಹಕಾರ ನೀಡುತ್ತೇವೆ. ಮಾದ್ಯಮದಲ್ಲಿ ಆರೋಪಿಗಳ ಹೆಸರಿನ ಜೊತೆಗೆ ಭಟ್ಕಳ ಹೆಸರನ್ನು ಉಲ್ಲೇಖ ಮಾಡಲಾಗುತ್ತಿದೆ. ಇದರಿಂದ ಭಟ್ಕಳ ತಾಲೂಕಿನ ಹೆಸರಿಗೆ ಕಳಂಕ ಅಂಟುವ ಸಾಧ್ಯತೆಯಿದೆ ಎಂದರು.
ಇನ್ನೂ ತಂಝೀಮ್ ಸಂಸ್ಥೆಯ ಸದಸ್ಯ ಇಮ್ರಾನ್ ಲಂಖಾ ಮಾತನಾಡಿ ” ಗೋ ಕಳ್ಳತನ ಪ್ರಕರಣ ಒಂದು ಕಮ್ಯನಿಟಿಗೆ ಹೆಸರು ಮಾತ್ರ ಮುನ್ನೆಲೆಗೆ ತರಲಾಗುತ್ತಿದೆ. ಆದರೆ ಕಳೆದ ಎರಡು ವರ್ಷಗಳ ಪೋಲಿಸ್ ದಾಖಲೆಯ ಪ್ರಕಾರ ಗೋ ಕಳ್ಳತನ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಎಲ್ಲಾ ಧರ್ಮದವರು ಇದ್ದಾರೆ ಎಂದರು. ಇನ್ನೂ ಇತ್ತೀಚಿನ ದಿನಗಳಲ್ಲಿ ಗೋ ಕಳ್ಳತನ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಟ್ಕಳದ ಯಾವ ಮುಸ್ಲೀಮರು ನಿರ್ಧಿಷ್ಠ ಅವಧಿಯ ವರೆಗೆ ಗೋಮಾಂಸ ಸೇವಿಸದಂತೆ ಆದೇಶ ಹೊರಡಿಸಲಾಗಿದೆ ಎಂದರು.
ಇದನ್ನೂ ಓದಿ
- School Holiday/ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಜೂನ್ 1 ರಿಂದ 30ರ ತನಕ ಈ ಸರಕಾರದಿಂದ ಅಧಿಕೃತ ರಜೆ ಘೋಷಣೆ
- ಬೆಂಗಳೂರಿಗೆ ಒಲಿದ ಐಪಿಎಲ್ 2026 ಮುಕುಟ: ಗುಜರಾತ್ ಮಣಿಸಿ ಸತತ ಎರಡನೇ ಬಾರಿ ಚಾಂಪಿಯನ್ ಆದ RCB!
- ಕರಾವಳಿಯಲ್ಲಿ ಜೂನ್ 1ರಿಂದ 61 ದಿನ ಯಾಂತ್ರೀಕೃತ ಮೀನುಗಾರಿಕೆ ಸಂಪೂರ್ಣ ನಿಷೇಧ
- ಹೊನ್ನಾವರದಲ್ಲಿ ಆರ್ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಓವರ್ಲೋಡ್ ಸಾಗಿಸುತ್ತಿದ್ದ 17ಲಾರಿ ವಶಕ್ಕೆ

