ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು : ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕನ್ನಡ ಚಿತ್ರದ ಮೇರು ನಟ ಡಾ,ಶಿವರಾಜಕುಮಾರ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಕೆಲ ದಿನಗಳ ಕಾಲ ಅವರು ವಿಶ್ರಾಂತಿ ಪಡೆದುಕೊಂಡಿದ್ದು,ಗಣರಾಜ್ಯೋತ್ಸವ ದಿನದಂದು ಅವರು ಬೆಂಗಳೂರಿಗೆ ವಾಪಸ್ ಆಗುವುದಾಗಿ ಅಭಿಮಾನಿಗೆ ತಿಳಿಸಿದ್ದಾರೆ.

ಕ್ಯಾನ್ಸರ್‌ ಚಿಕಿತ್ಸೆಗಾಗಿ ಕಳೆದ‌ ಒಂದು ತಿಂಗಳ‌ ಹಿಂದಷ್ಟೆ ಶಿವರಾಜ್‌ಕುಮಾರ ಹಾಗೂ ಪತ್ನಿ, ಹಾಗೂ‌ ಗೀತಾ ಶಿವರಾಜ್‌ಕುಮಾರ ಸಹೋದರ ಸಚಿವ ಮಧುಬಂಗಾರಪ್ಪ ಸೇರಿ ಕುಟುಂಬದ ಸದಸ್ಯರೊಂದಿದೆ. ಅಮೇರಿಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು.‌ಬಳಿಕ ಅವರು ಚೇತರಿಸಿಕೊಂಡಿದ್ದು, ಕೆಲ‌ ದಿನಗಳ ಕಾಲ‌ ಅಮೇರಿಕಾದಕ್ಕಾದಲ್ಲೆ ವಿಶ್ರಾಂತಿಗೆ ಒಳಗಾಗಿದ್ದರು. ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ನಾಳೆ‌, ಗಣರಾಜೋತ್ಸವ ದಿನದಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಶಿವರಾಜ್‌ಕುಮಾರ ಗುಣಮುಖರಾಗಿ ಮರಳುತ್ತಿರುವ ಸುದ್ದಿ ತಿಳಿದ‌ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದ್ದು, ತಮ್ಮ ನೆಚ್ಚಿನ ನಟನ ಆಗಮನಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.‌ ಶಿವರಾಜ್‌ಕುಮಾರ ಅವರನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಕೊಳ್ಳು ಅಭಿಮಾನಿಗಳು ಭರ್ಜರಿ ಸಿದ್ದತೆ ಮಾಡಿಕೊಂಡಿದ್ದಾರೆ.

ಇನ್ನಷ್ಟು ಓದಿ