ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ರಾಜಕೀಯ ಉದ್ದೇಶದಿಂದ ಮೈಸೂರು ಬಿಟ್ಟು ಕರಾವಳಿ ತಾಲೂಕಿಗೆ ಬಂದು ಕಳೆದ 15ವರ್ಷದಿಂದ ನೆಲೆಯೂರಿರುವ ಸದ್ಯ ಕಾಂಗ್ರೇಸ್ ಮುಖಂಡ‌ ಹಾಗೂ ಉದ್ಯಮಿಯೂ ಆಗಿರುವ ವ್ಯಕ್ತಿ ಓರ್ವನ ಕಾಮಕೇಳಿ ಆಡಿಯೋ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ.

ಹೌದು ಈತ ಉದ್ಯೋಗಕ್ಕಾಗಿ ಊರು ಬಿಟ್ಟು ಮೈಸೂರು ಸೇರಿಕೊಂಡು ಆರ್ಭ ಶ್ರೀಮಂತರ ಕುಟುಂಬದ ಸಂಬಂಧ ಮಾಡಿಕೊಂಡು ಸಾಕಷ್ಟು ಹಣ ಮಾಡಿ ಒಂದಿಷ್ಟು ವರ್ಷಗಳ ಕಾಲ‌ ಮೈಸೂರಿನಲ್ಲಿ ವಾಸವಾಗಿದ್ದ, ಬಳಿಕ ಉತ್ತರಕನ್ನಡ ಜಿಲ್ಲೆಗೆ ಕಾಲಿಟ್ಟ ಈತ ಕರಾವಳಿಯ ಗಡಿ ಭಾಗದ ಕ್ಷೇತ್ರವೊಂದರಿಂದ ಪ್ರಾದೇಶಿಕ ಪಕ್ಷವೊಂದಿಂದ ಸ್ಪರ್ಧೆ ಸಹ ಮಾಡಿ ಸೋತ್ತಿದ್ದ, ಬಳಿಕ ಅಲ್ಲಿಂದ ಕುಮಟಾ ಕ್ಷೇತ್ರವನ್ನ ಆಯ್ಕೆ ಮಾಡಿಕೊಂಡು ಮಹಿಳಾ ಸಂಘಟನೆ ಮಾಡುವ ಮೂಲಕ ತನ್ನದೆ ಹೆಸರಿನದಲ್ಲಿ ಮಹಿಳಾ ಸಂಘಗಳಿಗೆ ಸಾಲವನ್ನ ಸಹ ನೀಡುತ್ತಿದ್ದ.

ಆದರೆ ಆತನ ಸಂಘದಿಂದ ಮಹಿಳೆಯರು ಪಡೆದ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದೆ ಇದ್ದಾಗ ಅವರಿಗೆ ಸಾಕಷ್ಟು ಕಿರುಕುಳ ಕೂಡ ನೀಡಿದ್ದುತ್ತಿದ್ದ ಎನ್ನಲಾಗಿದೆ. ಅದು ಸಾಲದು ಎಂದು ಆ ಮಹಿಳೆಯರನ್ನ ಖಾಸಗಿ ಕೆಲಸಕ್ಕೂ ಕರೆಯುತ್ತಿದ್ದ ಎನ್ನುವ ಗುಸುಗಸು ಕೇಳಿಬರುತ್ತಿತ್ತು.‌ಆದರೆ ಇದೀಗ ಆತ ಒಂದಿಷ್ಟು ಮಹಿಳೆಯರಿಯೆ ಪೋನ್ ಮಾಡಿದ ವೇಳೆ ಅಭ್ಯವಾಗಿ ಮಾತನಾಡಿ ಸುಖ ನೀಡಲು ಬರುವಂತೆ ಕೇಳಿಕೊಂಡಿದ್ದನಂತೆ. ಆ ಮಹಿಳೆ ಈತನ ಕಾಮಕೇಳಿ ಸಂಭಾಷಣೆಯನ್ನ ಸಹ ತನ್ನ ಮೊಬೈಲ್‌ನಲ್ಲಿ ರೆರ್ಕಾಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ..

ಈತನ ವರ್ತನೆ ಇದೆ ರೀತಿ ಮುಂದುವರೆದಲ್ಲಿ ನೊಂದ ಮಹಿಳೆಯರು ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಹ ನಿರ್ಧರಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ