ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಸವಣೂರಿನಿಂದ ಕುಮಟಾ ಸಂತೆ ವ್ಯಾಪಾರಕ್ಕೆ ತೆರಳುತ್ತಿದ್ದ ವ್ಯಾಪಾರಸ್ಥರಿದ್ದ ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ ಸ್ಥಳದಲ್ಲೇ 9ಮಂದಿ ಸಾವನ್ನಪ್ಪಿದ್ದು, ಇನ್ನೋರ್ವ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು,ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಖಚಿತ ಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರಿನಿಂದ ಯಲ್ಲಾಪುರ ಮಾರ್ಗವಾಗಿ ಕುಮಟಾ ಸಂತೆ ವ್ಯಾಪರಕ್ಕಾಗಿ ತರಕಾರಿ,ಹಣ್ಣು ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿಯಾಗಿ 10 ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರಿನವರು ಅಂತಾ ಗೊತ್ತಾಗಿದೆ. ಲಾರಿಯಲ್ಲಿ ಒಟ್ಟು 30ಮಂದಿ ವ್ಯಾಪಾರಸ್ಥರು ಪ್ರಯಾಣ ಮಾಡುತ್ತಿದ್ದು, ಅದರಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದು ಇನ್ನೂಳಿದ 20ಮಂದಿಗೂ ಗಾಯವಾಗಿದೆ.
ಮೃತರು
ಫಯಾಜ್ ಇಮಾಮ್ ಸಾಬ್ ಜಮಖಂಡಿ 45, ವಾಸೀಮ್ ವಿರುಲ್ಲಾ ಮುಡಗೇರಿ 35, ಇಜಾಜ್ ಮುಸ್ತಕಾ ಮುಲ್ಲಾ 20, ಸಾದೀಕ್ ಭಾಷ್ ಫಾರಷ್ 30, ಗುಲಾಮ್ಉಷೇನ್ ಜವಳಿ 40, ಇಮ್ತಿಯಾಜ್ ಮಮಜಾಪರ್ ಮುಳಕೇರಿ 36, ಅಲ್ಪಾಜ್ ಜಾಫರ್, ಮಂಡಕ್ಕಿ 25, ಜೀಲಾನಿ ಅಬ್ದುಲ್ ಜಖಾತಿ 25, ಅಸ್ಲಂ ಬಾಬುಲಿ ಬೆಣ್ಣಿ 24, ಎಂಬುವವರು ಸ್ಥಳದಲ್ಲೆ ಸಾವನ್ನಪ್ಪಿದ್ದು, .ಜಲಾಲ್ ತಾರಾ 30, ಸವಣೂರು. ಹುಬ್ಬಳಿ ಕೀಮ್ಸ್ ಆಸ್ಪತ್ರೆಯಲ್ಲಿ ಸಾವು
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು
ಅಶ್ರಪ್ ತಂದೆ ನಬಿ ಸಾಬ್ ಲಾರಿ ಡ್ರೈವರ್ 18 ವರ್ಷ, ಖ್ವಾಜಾ ತಂದೆ ಮೊಹಮ್ಮದ್ ಗೌಸ್ ಕಿಸಮತಗಾರ್ 22, ಮೊಹಮ್ಮದ್ ಸಾದಿಕ ತಂದೆ ಖ್ವಾಜಾಮೀರ್ ಬತ್ತೇರಿ 25 ವರ್ಷ. ಖ್ವಾಜಾ ಮೈನು ತಂದೆ ಬಷೀರ್ ಅಹಮ್ಮದ್ ಕಾಲೆಕಾಲನ್ನವರ್ 24 ವರ್ಷ , ನಿಜಾಮ್ 30 ವರ್ಷ, ಮದ್ಲಾನ್ ಸಾಬ್ 24 ವರ್ಷ,ಜಾಪರ್ ತಂದೆ ಮುಕ್ತಿಯಾರ್ ಪ್ರಾಸ್ 22 ವರ್ಷ,
ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು
ಮಲ್ಲಿಕ ರೆಹಾನ್ ತಂದೆ ಮೊಹಮ್ಮದ್ ರಫೀಕ್ ಅಕ್ಕಿ 21 ವರ್ಷ, ಅಪ್ತಾಬ್ ತಂದೆ ಭಷೀರ್ ಅಹಮಮದ್ ಮಂಚಕಿ 23 ವರ್ಷ, ಗೌಸ್ ಮೈದ್ದೀನ್ ತಂದೆ ಅಬ್ದುಲ್ ಗಣಿ ಬೊಮ್ಮನಹಳ್ಳಿ 30 ವರ್ಷ, ಇರ್ಪಾನ್ ತಂದೆ ಮುಕ್ಷುಲ್ ಗುಡಿಗೇರಿ 17 ವರ್ಷ, ನೂರ ಅಹಮ್ಮದ್ ಜಮಕಂಡಿ 30 ವರ್ಷ , ಅಪ್ಸರ್ ಕಾಂಜಾಡ್ 34 ವರ್ಷ, ಸುಭಾಷ ಗೌಡರ್ 17 ವರ್ಷ. ಖಾದ್ರಿ ಜವಳಿ 26 ವರ್ಷ, ಸಾಬೀರ್ ಅಹಮ್ಮದ ಬಾಬಾ ಹುಸೇನ್ ಗವಾರಿ 38 ವರ್ಷ, ಮರ್ದಾನ್ ಸಾಬ್ ತಾರಾಡಿಗ 22 ವರ್ಷ, ರಪಾಯಿ ತಂದೆ ಬಾಕರ್ ಚೌರ 21 ವರ್ಷ,ಮೊಹಮ್ಮದ್ ಗೌಸ ಅಕ್ತರ್ 22 ವರ್ಷ,
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್
ತಾಲೂಕಿನ ಅರಬೈಲ್ ಗ್ರಾಮದಲ್ಲಿ ಹಣ್ಣು ತುಂಬಿದ ಲಾರಿ ಪಲ್ಟಿಯಾಗಿ 10ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ತಿಳಿದ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು,ಮೃತ ದೇಹವನ್ನು ಮೃತರ ಮನೆಗೆಳಿಗೆ ಆದಷ್ಟು ಶೀಘ್ರವಾಗಿ ತಲುಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಶಿರಸಿ ಹೆದ್ದಾರಿ ಬಂದ್ ಆಗಿದ್ದೇ ದುರಂತಕ್ಕೆ ಕಾರಣವೇ..?
ಅಪಘಾತದಲ್ಲಿ ಮೃತಪಟ್ಟವರು ಹಾವೇರಿಯಿಂದ ಕುಮಟಾದಲ್ಲಿ ಇಂದು ನಡೆಯುವ ಸಂತೆ ವ್ಯಾಪರಕ್ಕಾಗಿ ಲಾರಿಯಲ್ಲಿ ಹಣ್ಣು,ತರಕಾರಿ ತುಂಬಿ ಕೊಂಡು ಬರುತ್ತಿದ್ದರು.ಹಾವೇರಿಯಿಂದ ಶಿರಸಿ ಮಾರ್ಗವಾಗಿ ಕುಮಟಾಕ್ಕೆ ಬರೋದಕ್ಕೆ ಹತ್ತಿರದ ಮಾರ್ಗವಾಗಿದ್ದರೂ ಸಹ ಸದ್ಯ ದುರಸ್ಥಿ ಹೆಸರಲ್ಲಿ ಶಿರಸಿ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಿರುವ ಕಾರಣ ಈ ಲಾರಿ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಮೂಲಕ ಕುಮಟಾಕ್ಕೆ ಬರಬೇಕಾದ ಕಾರಣ ಸುತ್ತಿಬಳಸಿ ಬರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಇವರು ಯಲ್ಲಾಪುರ ಮಾರ್ಗವಾಗಿ ಕುಮಟಾಕ್ಕೆ ಬರುವ ಸಮಯದಲ್ಲಿ ಈ ದುರಂತ ಸಂಭವಿಸಿದೆ..ಶಿರಸಿ ಹೆದ್ದಾರಿ ಬಂದ್ ಆಗದೆ ಇದ್ದರೆ ಇವರೆಲ್ಲರ ಜೀವ ಉಳಿಯುತ್ತಿತ್ತೊ ಏನೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಸಿಎಂ ಸಂತಾಪ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ನಡೆದ ಅಪಘಾತದಲ್ಲಿ ಹತ್ತು ಮಂದಿ ಮೃತಪಟ್ಟಿರುವ ಸಿ ಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ದುರಂತದ ವಿಚಾರದಲ್ಲಿ ಮನಸ್ಸಿಗೆ ತುಂವಾ ನೋವಾಗಿದೆ.ಮೃತರ ಆತ್ಮಕ್ಕ ಶಾಂತಿಕೋರುತ್ತೇನೆ.ಜೊತೆಗೆ ಮೃತ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ