ಸುದ್ದಿಬಿಂದು ಬ್ಯೂರೋ ವರದಿ (suddibindu digital news)
Udupi:ಉಡುಪಿ: ಕಾರ್ಕಳದ ಮಹಿಳೆ ಡಿಜಿಟಲ್ ವಂಚನೆಗೆ ಬಲಿಯಾಗಿ 24 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
ಪ್ರೀಮಾ ಶೆರಿಲ್ ಡಿಸೋಜ ಅವರು ಜನವರಿ 7ರಂದು ಮನೆಯಲ್ಲಿರುವಾಗ ಅನಾಮಿಕ ವ್ಯಕ್ತಿಯಿಂದ ಕರೆ ಸ್ವೀಕರಿಸಿದ್ದಾಗಿ ಹೇಳಿದ್ದಾರೆ.ಕರೆ ಮಾಡಿದ ವ್ಯಕ್ತಿ ತಾನು ದೆಹಲಿಯ ಟೆಲಿಕಾಂ ಇಲಾಖೆಯಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿ, ಪ್ರೀಮಾ ಅವರ ಆಧಾರ್ ಸಂಖ್ಯೆಯನ್ನು ಉಪಯೋಗಿಸಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಸಿಮ್ ಕಾರ್ಡ್ ಖರೀದಿಸಲಾಗಿದ್ದು,ಅದನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆ ವ್ಯಕ್ತಿ ಪ್ರೀಮಾ ವಿರುದ್ಧ ಅನೇಕ ಪ್ರಕರಣಗಳು ದಾಖಲೆಯಾಗಿವೆ ಮತ್ತು ಈ ವಿಚಾರದಲ್ಲಿ ಸೈಬರ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಂತರ ವೀಡಿಯೋ ಕಾಲ್ ವೇಳೆ ಪೊಲೀಸ್ ಯೂನಿಫಾರ್ಮ್ ತೊಟ್ಟಿದ್ದ ವ್ಯಕ್ತಿ ತನ್ನನ್ನು ಸಿಬಿಐ ಅಧಿಕಾರಿಯಾಗಿದ್ದಾಗಿ ಪರಿಚಯಿಸಿಕೊಂಡು, ತನಿಖೆಗೆ ಸಹಕರಿಸುವಂತೆ ಪ್ರೀಮಾಳಿಗೆ ಸೂಚಿಸಿದರು. ಈ ವಿಷಯವನ್ನು ಯಾರಿಗೂ ಹೇಳದಂತೆ ಎಚ್ಚರಿಸಿದ್ದಲ್ಲದೆ ಪ್ರೀಮಾಳ ಪತಿ ಮತ್ತು ಮಕ್ಕಳನ್ನ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ.
ಆ ವ್ಯಕ್ತಿ ಪ್ರೀಮಾ ಅವರ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದು, ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸುವಂತೆ ಬಲವಂತ ಮಾಡಿದ್ದಾನೆ. ಹೇಳಿದಂತೆ ಮಾಡದೆ ಇದಲ್ಲಿ ಬಂಧನ ವಾರಂಟ್ ಜಾರಿ ಮಾಡುವುದಾಗು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಪ್ರೀಮಾ ರೂ14 ಲಕ್ಷವನ್ನು ಫೆಡರಲ್ ಬ್ಯಾಂಕ್ ಖಾತೆಗೆ ಮತ್ತು ರೂ 10 ಲಕ್ಷವನ್ನು ಯೆಸ್ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ತನ್ನ ಫಿಕ್ಸ್ಡ್ ಡಿಪಾಸಿಟ್ ಖಾತೆಯಿಂದ ವರ್ಗಾವಣೆ ಮಾಡಿದ್ದಾರೆ.
ಈ ಬಗ್ಗೆ, ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ BNS ವಿಭಾಗ 308(2) ಮತ್ತು ಐಟಿ ಕಾಯ್ದೆಯ 66(D) ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಗಮನಿಸಿ