ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಕುಮಟಾ ತಾಲೂಕಿನ ಬಾಡ-ಹೊಲನಗದ್ದೆ ಗ್ರಾಮದ ಯತೀಶ್ ನಾಯ್ಕ ತಂಡಕ್ಕೆ ಚಾಂಪಿಯನ್ ಪಟ್ಟ ತರುವುದರಲ್ಲಿ ಅಮೋಘ ಕೊಡುಗೆ ನೀಡಿದ್ದಾರೆ.
ಕುಮಟಾ ತಾಲೂಕಿನ ಬಾಡ-ಹೊಲನಗದ್ದೆ ಗ್ರಾಮದ ಗಿರೀಶ್ ನಾಯ್ಕ ಮತ್ತು ಭಾರತಿ ನಾಯ್ಕ ಅವರ ಪುತ್ರನಾದ ಯಶೀಶ್ ನಾಯ್ಕ ಪ್ರತಿಭಾನ್ವಿತ ವಾಲಿಬಾಲ್ ಆಟಗಾರನಾಗಿದ್ದಾನೆ. ಈ ಯುವ ಪ್ರತಿಭೆ ಉತ್ತರಕನ್ನಡ ಜಿಲ್ಲೆಯ ಹಾಗೂ ದೇಶದ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವಂತೆ ಮಾಡಿದ್ದಾನೆ. ಬಾಂಗ್ಲಾದೇಶ, ಶ್ರೀಲಂಕಾ ಮತ್ತು ನೇಪಾಳದಂತಹ ತಂಡಗಳನ್ನು ಮಣಿಸಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಯತೀಶ್ ಕೊಡುಗೆ ಅಪಾರವಾಗಿದೆ.
ಯತೀಶ್ ನಾಯ್ಕ ತನ್ನ ಪ್ರಾಥಮಿಕ ಶಿಕ್ಷಣವನ್ನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು, ಬಳಿಕ ಪ್ರೌಢ ಶಿಕ್ಷಣವನ್ನ ಜನತಾ ವಿದ್ಯಾಲಯ ಬಾಡ-ಕಾಗಾಲದಲ್ಲಿ ಮುಗಿಸಿದ್ದು, ಕಾಲೇಜು ಶಿಕ್ಷಣವನ್ನ
ಆಳ್ವಾಸ್ ಮೂಡುಬಿದಿರೆ ಹಾಗೂ ಡಾ ಎ ವಿ ಬಾಳಿಗಾ ಕಾಲೇಜು ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ
ಕುಮಟಾದಲ್ಲಿ ಮುಗಿಸಿದ್ದಾರೆ.
ಕ್ರೀಡಾ ಸಾಧನೆ:23-24ನೇ ಸಾಲಿನಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ volleyball federation of India ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದು,
23/24ನೇ ಸಾಲ್ಲಿನಲ್ಲಿ ಹಾಸನದಲ್ಲಿ ನಡೆದ ಪದವಿ ಪೂರ್ವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತ್ರತೀಯ ಸ್ಥಾನ ಪಡೆದಿದ್ದಾನೆ, ಕಳೆದ ವರ್ಷ ನವೆಂಬರನಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದು, 2024ರ ಡಿಸೆಂಬರ್ ನೇಪಾಳದಲ್ಲಿ ನಡೆದ ಅಂತರ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಹೆಮ್ಮೆತಂದುಕೊಟ್ಟಿದ್ದಾನೆ..
ಗಮನಿಸಿ